ಸುಂಟಿಕೊಪ್ಪ, ಜು. ೨೮: ೧೧೪ನೇ ವರ್ಷದ ಬ್ಯಾಂಕ್ ಆಫ್ ಬರೋಡದ (ವಿಜಯ ಬ್ಯಾಂಕ್) ಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.

ಸ್ಥಾಪನಾ ದಿನದ ಅಂಗವಾಗಿ ಬ್ಯಾಂಕಿಗೆ ಆಗಮಿಸಿದ ಗ್ರಾಹಕರಿಗೆ ಸಿಹಿಯನ್ನು ವಿತರಿಸಿ ಆಚರಿಸಿಕೊಂಡರು.

ಈ ಸಂದರ್ಭ ಬ್ಯಾಂಕಿನ ವ್ಯವಸ್ಥಾಪಕರಾದ ರಾಮ ಕೋಟಿ ರೆಡ್ಡಿ, ಅಧಿಕಾರಿಗಳಾದ ಜಯ ಹೆಗ್ಡೆ, ಸತೀಶ್ ಗಂಗಾಧರ್, ತೇಜೇಶ್ವರಿ, ರವಿ ದ್ರೋಣಮ್ ರಾಜ್, ಸಿಬ್ಬಂದಿ ಟಿ. ಸಂತೋಷ್, ಹಾಗೂ ಕಾಫಿ ಬೆಳೆಗಾರ ಜಯರಾಜ್ ಹಾಜರಿದ್ದರು.