ಸೋಮವಾರಪೇಟೆ, ಜು. ೨೮: ಸಮೀಪದ ತೋಳೂರು ಶೆಟ್ಟಳ್ಳಿಯ ಇನಕನಳ್ಳಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸ್ನೇಕ್ ಪ್ರವೀಣ್ ಅವರು ಸೆರೆಹಿಡಿದು, ಪುಷ್ಪಗಿರಿ ಅರಣ್ಯಕ್ಕೆ ಬಿಟ್ಟರು.

ಜನವಸತಿ ಪ್ರದೇಶದಲ್ಲಿದ್ದ ಕಾಳಿಂಗ ಸರ್ಪದಿಂದಾಗಿ ಸ್ಥಳೀಯರಲ್ಲಿ ಆತಂಕ ಮೂಡಿತ್ತು. ಈ ಬಗ್ಗೆ ಪ್ರವೀಣ್ ಅವರಿಗೆ ಮಾಹಿತಿ ನೀಡಿದ ಮೇರೆ ಇಂದು ಸೆರೆ ಹಿಡಿದು, ಅರಣ್ಯ ಇಲಾಖಾ ಸಿಬ್ಬಂದಿಗಳ ಸಮಕ್ಷಮದಲ್ಲಿ ಪುಷ್ಪಗಿರಿ ಅರಣ್ಯಕ್ಕೆ ಬಿಡಲಾಯಿತು.