ಮಡಿಕೇರಿ, ಜು. ೨೮ : ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಶೌಚಾಲಯದಲ್ಲಿ ಶುಚಿತ್ವ ಕಾರ್ಯ ನೆರವೇರಿಸುತ್ತಿದ್ದ ಪ್ರಕಾಶ (೫೩) ಎಂಬವರು ತಾ.೨೮ ರಂದು ನಿಲ್ದಾಣದ ಶೌಚಾಲಯದ ಬಳಿ ಮೃತಪಟ್ಟಿದ್ದಾರೆ. ಇವರ ವಿಳಾಸ ತಿಳಿದಿದ್ದಲ್ಲಿ ಹಾಗೂ ವಾರಸುದಾರರು ಯಾರಾದರು ಇದ್ದರೆ, ಮಡಿಕೇರಿ ನಗರ ಪೊಲೀಸ್ ಠಾಣೆ-೦೮೨೭೨-೨೨೯೩೩೩ ಅಥವಾ ೯೪೮೦೮೦೪೯೪೫ ಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. ಪ್ರಕಾಶ್ ಅವರಿಗೆ ಅಂದಾಜು ೫೩ ವರ್ಷ ಆಗಿರಬಹುದು ಎಂದು ಊಹಿಸಲಾಗಿದೆ.