ಮಡಿಕೇರಿ, ಜು. ೧೯: ಪೊನ್ನಂಪೇಟೆ ತಾಲೂಕಿಗೆ ನೂತನ ತಹಶೀಲ್ದಾರ್ ಅನ್ನು ಶೀಘ್ರದಲ್ಲಿ ನೇಮಕ ಮಾಡುವಂತೆ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎ.ಎಸ್. ಕಟ್ಟಿ ಮಂದಯ್ಯ ಒತ್ತಾಯಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪೊನ್ನಂಪೇಟೆ ತಾಲೂಕು ರಚನೆಯಾದ ಬಳಿಕ ತಹಶೀಲ್ದಾರರನ್ನು ನೇಮಕ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಅವರು ವರ್ಗಾವಣೆಯಾಗಿದ್ದು, ತದನಂತರ ಯಾರನ್ನೂ ಆ ಸ್ಥಾನಕ್ಕೆ ಶಾಶ್ವತವಾಗಿ ನೇಮಕ ಮಾಡದ ಕಾರಣ ತಾಲೂಕು ಕಚೇರಿಯಲ್ಲಿ ನಡೆಯಬೇಕಿರುವ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಪರದಾಡುವಂತಾಗಿದೆ. ತಕ್ಷಣವೇ ಸಂಬAಧಿಸಿದವರು ತಾಲೂಕಿನ ಜನರ ಹಿತಕ್ಕಾಗಿ ತಹಶೀಲ್ದಾರರನ್ನು ನೇಮಕ ಮಾಡುವಂತೆ ಕಟ್ಟಿ ಮಂದಯ್ಯ ಅವರು ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ.