ಶನಿವಾರಸಂತೆ, ಜು. ೧೯: ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತಲಕೇರಿ ಗ್ರಾಮದಲ್ಲಿ ರೈತ ಎಚ್.ಟಿ. ಮಂಜುನಾಥ್ ಎಂಬವರ ಜಮೀನಿಗೆ ನುಗ್ಗಿದ ಕಾಡಾನೆ ದಾಂಧಲೆ ಎಬ್ಬಿಸಿ ಶುಂಠಿ ಬೆಳೆ ಹಾಗೂ ಫಸಲು ಕೊಡುತ್ತಿದ್ದ ತೆಂಗಿನ ಮರವನ್ನು ನಾಶಪಡಿಸಿದೆ. ಕೊಳವೆ ಬಾವಿಯ ಪೈಪ್ ಅನ್ನು ಕೂಡ ತುಳಿದು ನಷ್ಟಪಡಿಸಿದೆ ಎಂದು ವಲಯ ಅರಣ್ಯ ಇಲಾಖೆ ಅಧಿಕಾರಿ ಪ್ರಪುಲ್ ಶೆಟ್ಟಿ ಅವರಿಗೆ ಮಂಜುನಾಥ್ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ.