ಮಡಿಕೇರಿ, ಜು. ೧೦: ಕೆ.ವಿ.ಜಿ. ಇಂಜಿನಿಯರಿAಗ್ ಕಾಲೇಜಿನ ಆಡಳಿತ ಮಂಡಳಿ ಈ ವರ್ಷದಿಂದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಡಾ. ಕುರುಂಜಿ ವೆಂಕಟ್ರಮಣ ಗೌಡ ವಿದ್ಯಾರ್ಥಿವೇತನ’ವನ್ನು ನೀಡಲು ತೀರ್ಮಾನಿಸಿದೆ. ಈ ವರ್ಷ ದಾಖಲಾತಿಯಾಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಸಲುವಾಗಿ ಅರ್ಹತಾ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಅರ್ಹತಾ ಪರೀಕ್ಷೆಯು ಆಗಸ್ಟ್ ೮ರಂದು ನಡೆಯಲಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದೆ. ಪರೀಕ್ಷೆಯು ಔಟಿಟiಟಿe ಮುಖಾಂತರ ನಡೆಯಲಿದ್ದು, ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಪರೀಕ್ಷೆಯ ಎಲ್ಲಾ ಮಾಹಿತಿಗಳನ್ನು ಕಾಲೇಜಿನ ವೆಬ್ಸೈಟ್ ತಿತಿತಿ.ಞvgeಟಿgg.ಛಿomನಲ್ಲಿ ತಾ. ೧೪ರಂದು ಪ್ರಕಟಿಸಲಾಗುವುದು. ಆಸಕ್ತ ದ್ವಿತೀಯ ಪಿ.ಯು.ಸಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ಅರ್ಜಿಯನ್ನು ಔಟಿಟiಟಿe ಮುಖಾಂತರ ಸಲ್ಲಿಸುವಂತೆ ಕಾಲೇಜಿನ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಾ|| ರೇಣುಕಾ ಪ್ರಸಾದ್ ಕೆ.ವಿ. ತಿಳಿಸಿದ್ದಾರೆ. ಈ ಪರೀಕ್ಷೆಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಅರ್ಜಿ ಕಳುಹಿಸಲು ಆಗಸ್ಟ್ ೫ ಕೊನೆಯ ದಿನ.