*ವೀರಾಜಪೇಟೆ, ಜೂ. ೨೨: ರಾಯ್ ಡಿಸೋಜಾ ಹತ್ಯೆ ಖಂಡಿಸಿ ಇಂದಿನಿAದ ಕೊಡಗಿನ ಎಲ್ಲಾ ಚರ್ಚ್ಗಳಲ್ಲಿ ಮೊಂಬತ್ತಿ ಬೆಳಗಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ರೆವರೆಂಡ್ ಫಾದರ್ ಮದುಲೈ ಮುತ್ತು ಅವರ ನೇತೃತ್ವದಲ್ಲಿ ರಾಯ್ ಸಮಾಧಿ ಬಳಿ ಮೊಂಬತ್ತಿ ಬೆಳಗಿಸಿ, ಕ್ರೈಸ್ತ ಬಾಂಧವರು ಕತ್ತಿಗೆ ಕಪ್ಪು ಪಟ್ಟಿ ಧರಿಸಿ ಮೌನವಾಗಿ ಪ್ರತಿಭಟಿಸಿದರು.

ಈ ಶಾಂತಿಯುತ ಪ್ರತಿಭಟನೆ ಯನ್ನು ಕೊಡಗಿನ ಎಲ್ಲಾ ಚರ್ಚ್ಗಳಲ್ಲಿ ಮಾಡಲಾಗುವುದು ಎಂದು ಧರ್ಮಗುರು ತಿಳಿಸಿದರು.

ಈ ಸಂದರ್ಭ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಶನ್ ಸ್ಥಾಪಕ ಅಧ್ಯಕ್ಷ ಲಾರೆನ್ಸ್, ಉಪಾಧ್ಯಕ್ಷ ಜಾನ್ಸನ್ ಪಿಂಟೋ, ಪದಾಧಿಕಾರಿಗಳಾದ ಸೆಬಾಸ್ಟಿನ್, ಕ್ರಿಜಾವಲ್, ಮರ್ವಿನ್ ಲೋಬೋ, ಜೋಸೆಫ್, ಬೆನ್ನಿ ಅಗಸ್ಟಿನ್ ಕ್ರೆöÊಸ್ತ ಸಮುದಾಯದವರು ಹಾಜರಿದ್ದರು.