ಚೆಯ್ಯಂಡಾಣೆ, ಜೂ. ೨೨: ಸಿಂಗರ್ಸ್ ಜನರಲ್ ಗ್ರೂಪ್ ವತಿಯಿಂದ ಮಾಪಿಳಪಾಟ್ ಸ್ವರ್ಧೆಯನ್ನು ಆನ್‌ಲೈನ್ ಮೂಲಕ ನಡೆಸಲಾಯಿತು. ಸ್ವರ್ಧೆಯಲ್ಲಿ ೫೦ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡು ಕಮರುದ್ದೀನ್ ಸಖಾಫಿ ಕೊಡಗರಳ್ಳಿ, ಇರ್ಷಾದ್ ಖಾದಿರಿ ತ್ಯಾಗತೂರ್, ಅಝರ್ ಮುಸ್ಲಿಯಾರ್ ನಾಪೋಕ್ಲು, ಮನಾಫ್ ಸುಂಟಿಕೊಪ್ಪ, ಮೊಹಮ್ಮದ್ ಶಮೀಮ್ ಅಝದ್ ನಗರ, ನೌಫಲ್ ಕಿಕ್ಕರೆ, ರಿಯಾಜ್ ವೀರಾಜಪೇಟೆ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಗ್ರೂಪ್‌ನ ಸಂಸ್ಥಾಪಕ ಅಬ್ದುಲ್ ಮಜೀದ್ ಚೋಕಂಡಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಎಚ್ ಮೊಹಮ್ಮದ್ ಕುಶಾಲನಗರ, ಇಸಾಕ್ ಖಾನ್ ಸುಂಟಿಕೊಪ್ಪ,ಅಬ್ದುಲ್ ಫತಾಯಿ ಕಡಂಗ, ಷರೀಫ್ ಕುಶಾಲನಗರ, ಹಫೀಳ್ ಸಹದಿ ಕೊಳಕೇರಿ, ಸಿರಾಜುದ್ದಿನ್ ಚೋಕಂಡ ಹಳ್ಳಿ, ಆಶ್ರಫ್ ಕಡಂಗ, ಜಾಶೀರ್ ಮೂರ್ನಾಡ್ ಹಾಗೂ ತೀರ್ಪುಗಾರ ರಾಗಿ ಆಬೀದ್ ಉಸ್ತಾದ್ ಪೊನ್ನತ್ ಮೊಟ್ಟೆ ಕಾರ್ಯನಿರ್ವಹಿಸಿದರು.