ಮಡಿಕೇರಿ, ಜೂ. ೧೬: ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ಏಲಕ್ಕಿ ಮತ್ತು ಕರಿಮೆಣಸು ಗಿಡಗಳನ್ನು ಜಿಲ್ಲೆಯ ಐಗೂರು ಮತ್ತು ಬಿಳಿಗೇರಿ ನರ್ಸರಿಯಲ್ಲಿ ಪಡೆಯಬಹುದಾಗಿದೆ ಎಂದು ಭಾರತೀಯ ಸಂಬಾರ ಮಂಡಳಿಯ ಸಹಾಯಕ ನಿರ್ದೇಶಕ ಷರೀಫ್ ಕೋರಿದ್ದಾರೆ. ಆ ದಿಸೆಯಲ್ಲಿ ಉತ್ತಮ ಗುಣಮಟ್ಟದ ಏಲಕ್ಕಿ ಗಿಡವನ್ನು ೧೨ ರೂ. ಗೆ ಮತ್ತು ಕರಿಮೆಣಸು ಗಿಡವನ್ನು ೬ ರೂ. ನಲ್ಲಿ ಜಿಲ್ಲೆಯ ಐಗೂರು ಮತ್ತು ಬಿಳಿಗೇರಿ ಸಾಂಬಾರ ಮಂಡಳಿ ನರ್ಸರಿಯಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬಿಳಿಗೇರಿ ನರ್ಸರಿ ಸಂಬಾರ ಮಂಡಳಿಯ ನರ್ಸರಿ ವಿಭಾಗದ ೯೪೮೦೨೪೯೪೯೭ ಅಥವಾ ೭೯೭೫೩೫೪೦೦೫ ಹಾಗೂ ಐಗೂರು ಸಾಂಬಾರ ಮಂಡಳಿಯ ನರ್ಸರಿ ವಿಭಾಗ ೯೪೯೬೮೩೮೧೮೪ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.