ಚೆಟ್ಟಳ್ಳಿ, ಜೂ. ೭: ಎಸ್.ಕೆ.ಎಸ್. ಎಸ್.ಎಫ್. ತನ್ನ ಕಾರ್ಯವೈಖರಿ ಗಳನ್ನು ವಿಸ್ತರಿಸಲು, ಸೋಮವಾರಪೇಟೆ ಶಾಖೆ ನೂತನ ಸಮಿತಿಯನ್ನು ರಚಿಸಿದೆ. ಕೋವಿಡ್ ಕಾರಣದಿಂದಾಗಿ ಆನ್‌ಲೈನ್ ಮೂಲಕ ನಡೆದ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮತಿಯೊಂದಿಗೆ ನೂತನ ಅಧ್ಯಕ್ಷರಾಗಿ ಜನಾಬ್ ರಾಹಿಲ್ ಬಶೀರ್‌ರವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಗಳಾಗಿ ಅಬ್ದುಲ್ ನೌಶಾದ್, ಕೋಶಾಧಿಕಾರಿಯಾಗಿ ಅಬ್ದುಲ್ ರಝಾಕ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಶೀದ್ ಅಬ್ದುಲ್ಲಾ, ಸಹ ಕಾರ್ಯದರ್ಶಿಯಾಗಿ ಸಮದ್ ಕರ್ಕಳ್ಳಿ ಆಯ್ಕೆ ಯಾದರು. ಎಸ್.ಕೆ.ಎಸ್.ಎಸ್.ಎಫ್. ಅಧೀನದಲ್ಲಿ ಕಾರ್ಯನಿರ್ವಹಿಸುವ ವಿಖಾಯ ಸಮಿತಿಯ ಚೇರ್ಮಾನ್ ಆಗಿ ಅಬ್ದುಲ್ ರಝಾಕ್ ಆಲೆಕಟ್ಟೆ ಹಾಗೂ ಇಬಾದ್ ಸಮಿತಿಯ ಮುಖ್ಯಸ್ಥರಾಗಿ ಹುಸೈನ್ ಫೈಝಿ ಬಜೆಗುಂಡಿ ಹಾಗೂ ಟ್ರೆಂಡ್, ಸಹಚಾರಿ, ಸರ್ಗಲಯ, ತ್ವಲಬಾ ವಿಂಗ್ ಮುಖ್ಯಸ್ಥರನ್ನು ಕೂಡ ಆಯ್ಕೆ ಮಾಡಲಾಯಿತು.