ಮಡಿಕೇರಿ,ಜೂ.೭; ಮಡಿಕೇರಿ ನಗರದ ಕಸ ತ್ಯಾಜ್ಯ ಸಂಸ್ಕರಣಾ ಘಟಕವಾದ ಸ್ಟೋನ್ಹಿಲ್ ಬಳಿ ಸಂಗ್ರಹವಾಗಿರುವ ಹಳೆ ಕಸ ತ್ಯಾಜ್ಯಗಳ ವಿಲೇವಾರಿ ಹಾಗೂ ರಕ್ಷಣೆಗೆ ಸಂಬAಧಿಸಿದAತೆ ಕಸದ ಬೆಟ್ಟದಲ್ಲಿ ಗುಂಡಿ ಹಾಗೂ ಚರಂಡಿ ನಿರ್ಮಾಣ ಮಾಡಲಾಗಿದ್ದು, ಇದು ಅವೈಜ್ಞಾನಿಕವಾಗಿರುವದರಿಂದ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತಗೊಂಡಿದೆ. ಚರಂಡಿ ಹಾಗೂ ಗುಂಡಿಯನ್ನು ಮುಚ್ಚಿಸುವಂತೆ ನಗರಸಭೆಗೆ ಸೂಚನೆ ನೀಡಲಾಗಿದೆ. ಆದಷ್ಟು ಶೀಘ್ರ ಹೊಸದಾಗಿ ಗುರುತಿಸಲಾಗಿರುವ ಸ್ಥಳದಲ್ಲಿ ವೈಜ್ಞಾನಿಕವಾಗಿ ಕಸ ಸಂಸ್ಕರಣಾ ಘಟಕ ಕಾರ್ಯ ಆರಂಭಿಸುವAತೆಯೂ ತಿಳಿಸಲಾಗಿದೆ.
ಮಡಿಕೇರಿಯಲ್ಲಿ ಕಸವಿಲೇವಾರಿ ಸಮಸ್ಯೆ ಉಲ್ಬಣಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕೋರಿ ಸಮಸ್ಯೆ ಎದುರಿಸುತ್ತಿರುವ ನಾಲ್ಕು ವಾರ್ಡ್ಗಳ ನಾಗರಿಕರು ಎಸ್ಆರ್ವಿಕೆ ಹೆಸರಿನಲ್ಲಿ ಸಂಘವನ್ನು ರಚಿಸಿಕೊಂಡು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಕಸ ವಿಲೇವಾರಿಗೆ ಪರ್ಯಾಯ ಜಾಗ ಗುರುತಿಸುವದರೊಂದಿಗೆ ಪ್ರಸ್ತುತ ಇರುವ ಜಾಗದಿಂದ ಕಸದ ರಾಶಿಯನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವದು ಹಾಗೂ ಕಸ ಹಾಕುತ್ತಿರುವ ಜಾಗದ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು. ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವಂತೆ ಮಾಲಿನ್ಯ
(ಮೊದಲ ಪುಟದಿಂದ) ನಿಯಂತ್ರಣ ಮಂಡಳಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಈ ಸಂಬAಧ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಅಫಿಡಾವಿಟ್ ಮೂಲಕ ಸಲ್ಲಿಸುವಂತೆ ನಗರಸಭೆಗೆ ಸೂಚನೆ ನೀಡಿತ್ತು.
ಪೇಚಿಗೆ ಸಿಲುಕಿದ ನಗರಸಭೆ
ಕಳೆದ ಮೇ ೨೪ರಂದು ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗದರ್ಶನ ಪಾಲಿಸುವಂತೆ ಸೂಚನೆ ನೀಡಿ ಅಫಿಡಾವಿಟ್ ಸಲ್ಲಿಸುವಂತೆ ಆದೇಶ ಮಾಡಿ ಈ ಸಂಬAಧದ ವಿಚಾರಣೆಯನ್ನು ಜೂ. ೪ಕ್ಕೆ ಕಾದಿರಿಸಿತ್ತು. ಈ ಸಂಬAಧ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗದರ್ಶನದಂತೆ ನಗರ ಸಭೆಯಿಂದ ನ್ಯಾಯಾಲಯಕ್ಕೆ ಅಫಿಡಾವಿಟ್ ಸಲ್ಲಿಸಲಾಗಿದೆ. ಜೂ. ೧ರಂದು ಸಲ್ಲಿಸಲಾಗಿರುವ ಅಫಿಡಾವಿಟ್ನಲ್ಲಿ ಸ್ಟೋನ್ಹಿಲ್ ನಲ್ಲಿರುವ ಕಸದ ರಾಶಿಗೆ ಮಳೆನೀರು ಹರಿಯದಂತೆ ಚರಂಡಿ ನಿರ್ಮಾಣ ಮಾಡಲಾಗಿದೆ. ಮಳೆ ನೀರನ್ನು ಬೇರೆಡೆಗೆ ಹರಿಯಬಿಡಲು ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಇರುವ ತಡೆಗೋಡೆಯು ಕಸದ ರಾಶಿಯನ್ನು ತಡೆಯಲು ಶಕ್ತವಾಗಿದೆ. ಅಲ್ಲದೆ, ಕಸದ ಮೇಲೆ ಮಳೆನೀರು ಬೀಳದಂತೆ ತಡೆಯುವ ನಿಟ್ಟಿನಲ್ಲಿ ರಾಶಿಯ ಮೇಲೆ ಟಾರ್ಪಲಿನ್ಗಳನ್ನು ಹಾಸಲಾಗಿದೆ. ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಹಸಿ ಕಸ ಹಾಗೂ ಒಣ ಕಸಗಳನ್ನು ವಿಂಗಡಿಸಲಾಗುತ್ತಿದ್ದು, ಹಸಿ ಕಸದಿಂದ ಗೊಬ್ಬರ ತಯಾರಿಸಿ ಸಾಗಾಟ ಮಾಡಲಾಗುತ್ತಿದೆ. ಅಲ್ಲದೆ, ೧೫ನೇ ಹಣಕಾಸು ಯೋಜನೆಯಲ್ಲಿ ಮಡಿಕೇರಿಯ ದಾಸವಾಳದಲ್ಲಿ ಒಣ ಕಸ ಸಂಗ್ರಹ ಮಾಡಲು ಘಟಕ ಸ್ಥಾಪನೆಗೆ ರೂ. ೨೦ ಲಕ್ಷ ಕಾಯ್ದಿರಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ. ಹಸಿ ಕಸ ಸಂಗ್ರಹಣೆಗೆ ದೊಡ್ಡ ಕಸದ ತೊಟ್ಟಿಗಳನ್ನು ಖರೀದಿಸಲು ರೂ. ೩೦.೫ ಲಕ್ಷ ಕಾಯ್ದಿರಿಸಲಾಗಿದೆ. ಪ್ರಸ್ತುತ ಸಂಗ್ರಹವಾಗಿರುವ ಹಳೆ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಕೈಗೊಂಡಿರುವ ಕ್ರಮದ ಬಗ್ಗೆ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಸರಕಾರಿ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಹಾಗಾಗಿ ಪೇಚಿಗೆ ಸಿಲುಕಿದ ನಗರಸಭೆಯಿಂದ ಕಸದ ರಾಶಿ ಮೇಲೆ ಚರಂಡಿ ನಿರ್ಮಾಣ ಹಾಗೂ ಒಂದಿಷ್ಟಗಲ ಜಾಗದಲ್ಲಿ ಟಾರ್ಪಲಿನ್ಗಳನ್ನು ಹಾಸಲಾಗಿದ್ದು, ಅವೈಜ್ಞಾನಿಕ ಕ್ರಮವೆಂದು ಆಕ್ಷೇಪ ವ್ಯಕ್ತಪಡಿಸಿ ಶಾಸಕರು, ನಗರಸಭೆ ಸದಸ್ಯರುಗಳು, ಸನಿಹದ ಮದೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದಿಯಾಗಿ ಸದಸ್ಯರುಗಳು ಸ್ಥಳಕ್ಕೆ ಭೇಟಿ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯನ್ನು ಸ್ಥಗಿತಗೊಳಿಸು ವುದರೊಂದಿಗೆ ತೆರೆದಿರುವ ಗುಂಡಿಯನ್ನು ಮುಚ್ಚುವಂತೆ ಸೂಚನೆ ನೀಡಿದ್ದಾರೆ.
ಚರಂಡಿ ನಿರ್ಮಾಣ
ತಾ. ೧ ರಂದು ಅಫಿಡಾವಿಟ್ ಸಲ್ಲಿಕೆಯಾಗಿದೆಯಾದರೂ ಕೆಲಸ ಆರಂಭ ಮಾಡಿದ್ದು ತಾ. ೫ ರಂದು ಬೆಳಿಗ್ಗೆ ಹಿಟಾಚಿ ಯಂತ್ರವನ್ನು ಕೊಂಡೊಯ್ದು ಅದರ ಮೂಲಕ ಕಸದ ರಾಶಿಯಲ್ಲಿ ಚರಂಡಿ ನಿರ್ಮಾಣ ಮಾಡುವ ಕಾಂiÀiðಕ್ಕೆ ನಗರಸಭೆ ಯವರು ಮುಂದಾಗಿದ್ದಾರೆ. ವಿಷಯ ತಿಳಿದ ನಗರಸಭಾ ಸದಸ್ಯರುಗಳಾದ ಕೆ.ಎಂ. ಅಪ್ಪಣ್ಣ, ಉಮೇಶ್ ಸುಬ್ರಮಣಿ, ಸತೀಶ್, ಶ್ವೇತಾ, ಸಬಿತಾ, ಮದೆ ಗ್ರಾ.ಪಂ. ಸದಸ್ಯ ಜಯರಾಜ್ ಅವರುಗಳು ಕಸದ ರಾಶಿ ಮೇಲೆ ಯಂತ್ರದ ಮೂಲಕ ಚರಂಡಿ ನಿರ್ಮಾಣ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಇದರಿಂದ ಮಳೆ ನೀರು ಕಸದ ರಾಶಿಯಲ್ಲಿ ಸಂಗ್ರಹವಾಗಿ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಈ ಕೆಲಸವನ್ನು ಮುಂದುವರೆಸದAತೆ ಹಾಗೂ ಈಗಾಗಲೇ ತೆಗೆದಿರುವ ಗುಂಡಿಗಳನ್ನು ಮುಚ್ಚಿಸುವಂತೆ ನಗರಸಭಾ ಆಯುಕ್ತ ಹೆಚ್.ವಿ. ರಾಮದಾಸ್ ಹಾಗೂ ಅಧಿಕಾರಿಗಳಿಗೆ ಹೇಳಿದರು.
ಸದನದಲ್ಲಿ ತಪ್ಪು ಮಾಹಿತಿ
ಕಸದ ರಾಶಿಯ ಮಧ್ಯೆ ಚರಂಡಿ ನಿರ್ಮಿಸುತ್ತಿರುವ ಬಗ್ಗೆ ಮಾಹಿತಿ ಅರಿತ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ಸುಬ್ರಮಣಿ ಅವರು ಸಂಜೆ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿದರು. ಅಚ್ಚರಿ ವ್ಯಕ್ತಪಡಿಸಿದ ಅವರು, ಈ ಜಾಗದಲ್ಲಿ ಈ ರೀತಿಯ ಕೆಲಸ ಮಾಡಲು ಸಲಹೆ ಕೊಟ್ಟವರು ಯಾರೆಂದು ಆಯುಕ್ತರಲ್ಲಿ ಪ್ರಶ್ನಿಸಿದರು. ಈಗಾಗಲೇ ಗುಂಡಿ ನಿರ್ಮಾಣದಿಂದ ಗಜಗಿರಿ ಬೆಟ್ಟ ಕುಸಿದು ಅನಾಹುತವಾಗಿದೆ. ಇಲ್ಲೇನಾದರೂ ಆ ರೀತಿಯ ಘಟನೆ ಸಂಭವಿಸಿದರೆ ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಹೇಳಿದರಲ್ಲದೆ, ತಾನು ಈ ಬಗ್ಗೆ ಸದನದಲ್ಲಿ ಪ್ರಶ್ನಿಸಿದಾಗ ತಪ್ಪು ಮಾಹಿತಿ ನೀಡಿದ್ದ ಬಗ್ಗೆಯೂ ನೆನಪಿಸಿದರು. ಈ ಕಾರ್ಯ ಮುಂದುವರೆಸದAತೆ ಸೂಚಿಸಿದರು.
ಚರಂಡಿ, ಗುಂಡಿ ಮುಚ್ಚಬೇಕು
ನಿನ್ನೆ ದಿನ ಶಾಸಕ ಕೆ.ಜಿ. ಬೋಪಯ್ಯ ಅವರೂ ಕೂಡ ನಗರಸಭಾ ಸದಸ್ಯರುಗಳಾದ ಅನಿತಾ ಪೂವಯ್ಯ, ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಕೆ.ಎಂ. ಅಪ್ಪಣ್ಣ, ಮದೆ ಗ್ರಾ.ಪಂ.ಅಧ್ಯಕ್ಷೆ ಚಂದ್ರವತಿ ಹಾಗೂ ಸದಸ್ಯರುಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳ ಪರಿಶೀಲಿಸಿದ ಶಾಸಕರು, ಈ ಚರಂಡಿ ಹಾಗೂ ಗುಂಡಿಯಲ್ಲಿ ನೀರು ನಿಂತು ಮಣ್ಣು ಕುಸಿಯುವ ಸಾಧ್ಯತೆಯಿದೆ. ಕೆಳಭಾಗದಲ್ಲಿ ಕಾಟಕೇರಿ ಗ್ರಾಮವಿದ್ದು, ಕುಸಿಯಬಹುದು. ಅಲ್ಲದೆ, ಕಸದಿಂದ ಕೊಳೆತು ಹರಿಯುವ ಮಲಿನ ನೀರಿನಿಂದಾಗಿ ಗ್ರಾಮಸ್ಥರು ಕುಡಿಯುವ ನೀರಿನ ಮೂಲಗಳಿಗೂ ಧಕ್ಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ತೆಗೆದಿರುವ ಚರಂಡಿ ಹಾಗೂ ಗುಂಡಿಯನ್ನು ಮುಚ್ಚಿಸುವಂತೆ ಸೂಚನೆ ನೀಡಿದರು.
ಕೆಳಭಾಗಕ್ಕೆ ಕುಸಿತಗೊಂಡರೆ ಕೆಳಭಾಗದಲ್ಲಿ ವಾಸ ಮಾಡುತ್ತಿರುವ ಗ್ರಾಮಸ್ಥರಿಗೆ ಹಾಗೂ ಕುಡಿಯುವ ನೈಸರ್ಗಿಕ ನೀರಿನ ಮೂಲಕ್ಕೆ ತೊಂದರೆಯಾಗಲಿದೆ. ಹಾಗಾಗಿ ಬೆಟ್ಟದ ತುದಿಯಲ್ಲಿ ನಿರ್ಮಿಸಲಾಗಿರುವ ಗುಂಡಿಯನ್ನು ಮುಚ್ಚುವದಲ್ಲದೆ, ಈಗ ತೆರೆದಿರುವ ಚರಂಡಿಯಿAದ ನೀರು ಕೆಳಭಾಗಕ್ಕೆ ಹರಿಯಲು ಬಿಡದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಂತರದಲ್ಲಿ ಶಾಸಕರು ಹೊಸದಾಗಿ ಗುರುತಿಸಲಾಗಿರುವ ಎರಡನೇ ಮೊಣ್ಣಂಗೇರಿಯ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಜಾಗ ಕಸ ವಿಲೇವಾರಿಗೆ ಸೂಕ್ತವಾಗಿದ್ದು, ಹಳೆ ಕಸವನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡಿ ಹೊಸ ಜಾಗದಲ್ಲಿ ಪ್ರಕ್ರಿಯೆ ಆರಂಭಿಸುವAತೆ ಆಯುಕ್ತರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾಗದಲ್ಲಿ ಬೇಲಿ ನಿರ್ಮಿಸಿ
ಕಸ ವಿಲೇವಾರಿ ಮಾಡುವ ಸ್ಥಳಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ೨ನೇ ಮೊಣ್ಣಂಗೇರಿಯಲ್ಲಿ ಸರಕಾರದ ಮಟ್ಟದಲ್ಲಿ ಗುರುತಿಸಲಾಗಿರುವÀ ಕಸ ವಿಲೆೆÃವಾರಿ ಘಟಕ ನಿರ್ಮಾಣ ಪ್ರದೇಶದ ಸುತ್ತ ಬೇಲಿ ನಿರ್ಮಿಸುವಂತೆ ಶಾಸಕರು ಪೌರಾಯುಕ್ತ ರಾಮದಾಸ್ ಅವರಿಗೆ ಇದೇ ಸಂದರ್ಭ ಸೂಚಿಸಿದರು.
ಕಸ ವಿಲೇವಾರಿ ಪ್ರದೇಶದ ಚಿತ್ರಣ ಪಡೆದುಕೊಂಡ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಶಾಸಕರು, ತುಂಬಿರುವ ಕಸವನ್ನು ತೆರವು ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಅದು ಅಂತಿಮ ಹಂತದಲ್ಲಿದೆ. ಘಟಕದಲ್ಲಿ ಚರಂಡಿ ನಿರ್ಮಿಸಿ, ಟಾರ್ಪಲ್ ಹಾಕಿ ಮಳೆ ನೀರಿನಿಂದ ಅಪಾಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.
೨ನೇ ಮೊಣ್ಣಂಗೇರಿಯ ೧೦ ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಪ್ರಸ್ತಾವನೆ ಇದ್ದು, ಇದಕ್ಕೆ ರೂ. ೫ ಕೋಟಿಯ ಕ್ರಿಯಾ ಯೋಜನೆ ಕೂಡ ತಯಾರಿಸಲಾಗಿದೆ ಎಂದ ಅವರು, ನೊಣದ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪಡಿಸಲು ಸಂಬAಧಿಸಿದವರಿಗೆ ನಿರ್ದೇಶಿಸಿ ದರು. ಅವೈಜ್ಞಾನಿಕವಾಗಿರುವ, ಅಪಾಯದಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಇದೇ ಸಂದರ್ಭ ಹೇಳಿದರು.
ಪೌರಾಯುಕ್ತ ರಾಮದಾಸ್, ಸಂಗ್ರಹವಾಗುವ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲಾಗಿದೆ. ಈ ನಿಟ್ಟಿನಲ್ಲಿ ಗೊಬ್ಬರದ ಮಾದರಿಯನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ನಗರಸಭೆ ಹೆಸರಿನಲ್ಲಿ ಮಾರಾಟ ಮಾಡುವ ಚಿಂತನೆ ಇದೆ ಎಂದು ಶಾಸಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭ ನಗರಸಭಾ ಸದಸ್ಯರಾದ ಅಪ್ಪಣ್ಣ, ಅರುಣ್ ಶೆಟ್ಟಿ, ಕೆ.ಎಸ್. ರಮೇಶ್, ಉಮೇಶ್ ಸುಬ್ರಮಣಿ, ಶ್ವೇತಾ, ಸಬಿತಾ ಸೇರಿದಂತೆ ಇನ್ನಿತರರು ಇದ್ದರು.
ಈಗಾಗಲೇ ಮುಂಗಾರು ಅಡಿಯಿರಿಸಿದ್ದು, ಅಪಾಯ ಸಂಭವಿಸುವ ಮುನ್ನ ಜಾಗೃತರಾದರೆ ಒಳಿತೆಂಬದು ಸಾರ್ವಜನಿಕರ ಕಳಕಳಿಯಾಗಿದೆ.
-ಕುಡೆಕಲ್ ಸಂತೋಷ್