ಕಣಿವೆ, ಜೂ. ೭: ಇಡೀ ನಾಡು ಗಿಡ ನೆಟ್ಟು ಪರಿಸರ ದಿನವನ್ನು ಆಚರಿಸಿ ನಾಲ್ಕು ದಿನಗಳು ಕಳೆದಿಲ್ಲ. ಹಾರಂಗಿ ನೀರಾವರಿ ನಿಗಮದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಹಾರಂಗಿ ಎಡದಂಡೆ ಕಾಲುವೆಯ ಹೆಬ್ಬಾಲೆ ಬಳಿ ಕಾಲುವೆ ಏರಿಯಲ್ಲಿ ಬೆಳೆದಿದ್ದ ಗಿಡ ಮರಗಳನ್ನು ಉರುಳಿಸಿ ನೂರಾರು ಲೋಡ್ ಗಳಷ್ಟು ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡು ಬಂದಿದೆ.

ಸಾರ್ವಜನಿಕರ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದಾಗ ಜೆಸಿಬಿ ಯಂತ್ರವನ್ನು ಬಳಸಿ ಹತ್ತಾರು ಟ್ರಾö್ಯಕ್ಟರ್‌ಗಳಲ್ಲಿ ಮಣ್ಣನ್ನು ಸಾಗಿಸುತ್ತಿರುವುದು ಕಂಡು ಬಂತು.

ಅಲ್ಲದೆ ನಾಲೆ ನಿರ್ಮಾಣಗೊಂಡು ನಲವತ್ತು ವರ್ಷಗಳಿಂದ ಅಲ್ಲಿ ಸ್ವಾಭಾವಿಕವಾಗಿ ಬೆಳೆದಿರುವ ಗಿಡ, ಮರಗಳನ್ನು ನೆಲಕ್ಕುರುಳಿಸಿ ಮಣ್ಣು ತುಂಬಿಸಿ ಸಾಗಿಸುತ್ತಿದ್ದುದು ಗೋಚರಿಸಿತು.

ನಾಲೆ ನಿರ್ಮಿಸುವ ಸಂದರ್ಭ ನೀರಿನ ಸರಾಗ ಚಲನೆಗೆ ತಗ್ಗು ಪ್ರದೇಶಗಳಲ್ಲಿ ಮಣ್ಣಿನ ಬಂಡ್ ನಿರ್ಮಿಸಿ ನಾಲೆ ನಿರ್ಮಿಸಿರುವ ಮತ್ತು ಎತ್ತರದ ಪ್ರದೇಶಗಳಲ್ಲಿ ನಾಲೆ ನಿರ್ಮಿಸುವಾಗ ದೊರೆತ ಮಣ್ಣನ್ನು ನಾಲೆಯ

(ಮೊದಲ ಪುಟದಿಂದ) ಬದಿಯಲ್ಲಿ ರಾಶಿ ರಾಶಿ ಹಾಕಿರುವ ಕಡೆಗಳಲ್ಲಿ ಅಕ್ರಮವಾಗಿ ಮಣ್ಣನ್ನು ತುಂಬಿ ಸಾಗಿಸಿರುವ ಚಿತ್ರಣ ನಾಲೆಯ ಉದ್ದಕ್ಕೂ ಅಲ್ಲಲ್ಲಿ ಕಂಡು ಬರುತ್ತದೆ. ಈ ಮಣ್ಣನ್ನು ತಗ್ಗು ಪ್ರದೇಶಗಳನ್ನು ಸಮತಟ್ಟು ಮಾಡಲು ಕೆಲವು ಬಂಡವಾಳಶಾಹಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ.

ಇನ್ನು ಕೆಲವರು ತಗ್ಗು ಪ್ರದೇಶಗಳಲ್ಲಿನ ಕೃಷಿ ಭೂಮಿಯನ್ನು ಸಮತಟ್ಟು ಮಾಡಿ ಅಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅನುವು ಮಾಡಿಕೊಂಡಿರುವುದು ಕಂಡು ಬರುತ್ತಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಇನ್ನಾದರೂ ನಿರ್ಲಕ್ಷö್ಯ ವಹಿಸದೇ ಸಾರ್ವಜನಿಕ ಸಂಪನ್ಮೂಲವನ್ನು ಸಂರಕ್ಷಿಸಬೇಕಿದೆ. ಅಲ್ಲದೇ ಕಾಲುವೆಯ ರಸ್ತೆ ಬದಿಯಲ್ಲಿರುವ ಗಿಡ, ಮರಗಳ ಸಂರಕ್ಷಣೆಗೂ ಮುಂದಾಗಬೇಕಿದೆ. ಒಂದು ವೇಳೆ ನಾಲೆ ಬದಿಯಲ್ಲಿನ ಮಣ್ಣು ಅನಗತ್ಯವಾದಲ್ಲಿ ನಾಲೆಯುದ್ದಕ್ಕೂ ಸಂಗ್ರಹ ಗೊಂಡಿರುವ ಮಣ್ಣಿನ ರಾಶಿಯನ್ನು ಇಲಾಖೆಯಿಂದಲೇ ತೆರವು ಗೊಳಿಸಿ ಆ ಜಾಗದಲ್ಲಿ ಜಾಗ ಕಳೆದುಕೊಂಡ ಕೃಷಿಕರು ಬೆಳೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಹೆಬ್ಬಾಲೆ ಗ್ರಾಮದ ನಿವಾಸಿ ಚಂದ್ರಶೇಖರ್ ನೀರಾವರಿ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.