ಸೋಮವಾರಪೇಟೆ, ಜೂ. ೭: ಇಲ್ಲಿನ ಸಮಾನ ಮನಸ್ಕ 'ಸ್ಪಂದನ' ಗ್ರೂಪ್ ವತಿಯಿಂದ ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕಡುಬಡವರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು. ಇದರೊಂದಿಗೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಐಗೂರಿನ ಈರಪ್ಪ ಎಂಬವರಿಗೆ ಧನಸಹಾಯ ನೀಡಲಾಯಿತು. ಈ ಸಂದರ್ಭ ಗ್ರೂಪ್‌ನ ಅಧ್ಯಕ್ಷ ಅಕ್ಬರ್, ಪದಾಧಿಕಾರಿಗಳಾದ ಅಶ್ರಪ್, ತಾಜು ಕರ್ಕಳ್ಳಿ, ಹ್ಯಾರಿಸ್, ಷರೀಫ್, ಜುನೈದ್, ಹನೀಫ್ ಅವರುಗಳು ಉಪಸ್ಥಿತರಿದ್ದರು.