ಕಣಿವೆ, ಜೂ. ೭: ಜೋಳದ ಬಿತ್ತನೆ ಮಾಡಿ ಹತ್ತಾರು ದಿನಗಳು ಕಳೆದಿದ್ದು, ಮಳೆ ಇಲ್ಲದೆ ಬಿತ್ತಿದ ಬೀಜ ಒಣಗಿ ಹಾಳಾಗುತ್ತಿದೆ. ಮುನಿಸು ಬಿಟ್ಟು ಮಳೆ ಸುರಿಸು ಎಂದು ದೇವರಲ್ಲಿ ಗ್ರಾಮಸ್ಥರು ಮೊರೆ ಇಟ್ಟ ಪ್ರಸಂಗ ಕಾವೇರಿ ನದಿ ದಂಡೆಯಲ್ಲಿರುವ ಚಿಕ್ಕಹೊಸೂರು ಗ್ರಾಮದಲ್ಲಿ ನಡೆದಿದೆ.

ಕೇರಳಕ್ಕೆ ಜೂನ್ ೩ ರಂದು ಮುಂಗಾರು ಪ್ರವೇಶವಾಗಲಿದ್ದು, ತಾ. ೬ಕ್ಕೆ ಕೊಡಗು ಜಿಲ್ಲೆಗೆ ಪ್ರವೇಶವಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿಕೆ ನೀಡಿದ್ದರಿಂದ ನಾವು ಅದನ್ನು ನಂಬಿಕೊAಡು ಜೋಳದ ಬಿತ್ತನೆ ಮಾಡಿದೆವು. ಈಗ ನೋಡಿದರೆ ಮಳೆ ಬಾರದೆ ಜೋಳದ ಬೀಜ ಒಣಗಿ ಮೊಳಕೆ ಒಡೆಯುತ್ತಿಲ್ಲ. ನೀರಾವರಿ ಸೌಕರ್ಯ ಹೊಂದಿರುವವರು ನೀರನ್ನು ತಮ್ಮ ಜಮೀನುಗಳಿಗೆ ಹಾಯಿಸಿಕೊಳ್ಳುತ್ತಾರೆ.

(ಮೊದಲ ಪುಟದಿಂದ) ಅರೆ ನೀರಾವರಿ ಪ್ರದೇಶದ ಅನೇಕ ರೈತರು ವರುಣನನ್ನೇ ಆಶ್ರಯಿಸಿದ್ದೇವೆ. ಗ್ರಾಮದ ಸುತ್ತಲೂ ಒಂದೆರಡು ಮಳೆ ಸುರಿಸಿರುವ ವರುಣ ದೇವ ನಮ್ಮ ಮೇಲೆ ಮುನಿಸೇಕೆ? ಕೃಪೆ ತೋರು ದೇವಾ ಎಂದು ಗ್ರಾಮಸ್ಥರು ಸಾಮೂಹಿಕವಾಗಿ ಪ್ರಾರ್ಥಿಸಿದರು.

ಇನ್ನೊಂದೆಡೆ ಗ್ರಾಮದ ಮಹಿಳೆಯರು ಗ್ರಾಮ ದೇವತೆ ದೊಡ್ಡಮ್ಮ ದೇವರನ್ನು ಪೂಜಿಸಿ ಮಳೆಗಾಗಿ ಹಾಗೂ ಕೊರೊನಾ ನಿಗ್ರಹಕ್ಕಾಗಿ ಸಾಮೂಹಿಕವಾಗಿ ಪ್ರಾರ್ಥಿಸಿದರು.