ಗೋಣಿಕೊಪ್ಪಲು, ಜೂ.೭: ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಅರುವತೊಕ್ಕಲುವಿನಲ್ಲಿ ನಡೆದಿದೆ. ಅರುವತೊಕ್ಕಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿ.ಎಚ್.ಎಸ್. ಕಾಲೋನಿಯ ನಿವಾಸಿ ರಂಗಸ್ವಾಮಿ (೫೨) ಮೃತಪಟ್ಟ ದುರ್ದೈವಿ.
ಎಂದಿನAತೆ ರಂಗಸ್ವಾಮಿ ಮನೆಯ ಸಮೀಪವಿರುವ ಆಟದ ಮೈದಾನದಲ್ಲಿ ವಾಯುವಿಹಾರಕ್ಕಾಗಿ ತಮ್ಮ ಸಾಕು ನಾಯಿ ಯೊಂದಿಗೆ ತೆರಳು ತ್ತಿದ್ದರು. ಸೋಮವಾರ ಮುಂಜಾನೆ ೬ ಗಂಟೆ ವೇಳೆ ಇವರು ತಮ್ಮ ಮನೆಯಿಂದ ಹೊರಟು ಸಮೀಪದ ಆಟದ ಮೈದಾನ ಬಳಿಯ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಸಮೀಪದ ಕಾಫಿ ತೋಟದಲ್ಲಿದ್ದ ಕಾಡಾನೆ ರಸ್ತೆ ಬಳಿ ಬಂದು ರಂಗಸ್ವಾಮಿ ಮೇಲೆ ದಾಳಿ ನಡೆಸಿ ಎಸೆದಿದೆ. ಇದರಿಂದಾಗಿ ರಂಗಸ್ವಾಮಿಯ ಎದೆಯ ಭಾಗಕ್ಕೆ ಮಾರಣಾಂತಿಕ ಗಂಭೀರ ಪೆಟ್ಟಾಗಿತ್ತು. ಎಡಗಾಲು ಮುರಿತಕ್ಕೊಳಗಾಗಿತ್ತು.
ಸುದ್ದಿ ತಿಳಿದ ಗ್ರಾಮದ ಯುವಕರು ರಂಗಸ್ವಾಮಿಯನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ತಿತಿಮತಿ ಆರ್.ಎಫ್.ಓ.ಅಶೋಕ್ ಹುನಗುಂದ, ಪೊನ್ನಂಪೇಟೆಯ ರಾಜಪ್ಪ, ದಿವಾಕರ್ ಹಾಗೂ ಅರಣ್ಯ ಸಿಬ್ಬಂದಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವನ್ನು ವಿಚಾರಿಸಿ ತುರ್ತು ಚಿಕಿತ್ಸೆಗೆ ಹಣದ ಸಹಕಾರ ನೀಡುವ ವ್ಯವಸ್ಥೆ ಮಾಡಿದ್ದರು. ಅರುವತೊಕ್ಕಲು ಗ್ರಾಮ ಪಂಚಾಯಿತಿ
(ಮೊದಲ ಪುಟದಿಂದ) ಸದಸ್ಯರಾದ ಅಜ್ಜಿಕುಟ್ಟಿರ ಸಜನ್ ಚಂಗಪ್ಪ ಆಸ್ಪತ್ರೆಗೆ ಆಗಮಿಸಿ, ಧೈರ್ಯ ತುಂಬಿ ರಂಗಸ್ವಾಮಿಯನ್ನು ಮಂಗಳೂರಿನ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು. ಆದರೆ, ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಈ ವೇಳೆ ಮಡಿಕೇರಿ ಬಳಿ ತೆರಳುತ್ತಿದ್ದಂತೆಯೇ ತೀವ್ರ ಎದೆ ನೋವು ಕಾಣಿಸಿಕೊಂಡು ಮಾರ್ಗ ಮಧ್ಯದಲ್ಲಿ ರಂಗಸ್ವಾಮಿ ಅಸುನೀಗಿದ್ದಾರೆ. ನಂತರ ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿ, ಅಲ್ಲಿನ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು.
ರಂಗಸ್ವಾಮಿ ಸ್ಥಳೀಯ ವಿದ್ಯುತ್ ಗುತ್ತಿಗೆದಾರನಾಗಿ ಎಲೆಕ್ಟಿçಷಿಯನ್ ಆಗಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಏಳಕ್ಕೂ ಅಧಿಕ ಕಾಡಾನೆಗಳು ಬೀಡು ಬಿಟ್ಟಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಎಂದು ಸ್ಥಳೀಯ ನಾಗರಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿ ರಂಗಸ್ವಾಮಿ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷö್ಯವೇ ಕಾರಣ ಎಂದು ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜನನಿಬಿಡ ಪ್ರದೇಶದಲ್ಲಿ ಹೀಗಾದರೇ, ಒಂಟಿ ಮನೆಯಲ್ಲಿ ಇರುವ ನಾಗರಿಕರ ಪಾಡೇನು.? ಸಮೀಪದ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಿಂಡನ್ನು ಸ್ಥಳಾಂತರ ಮಾಡುವಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ವೇಳೆ ರೈತ ಸಂಘದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಮುಂದೆ ಘಟನೆ ನಡೆದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸುವುದಾಗಿ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಎಚ್ಚರಿಕೆ ನೀಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ್ ಕೂಡಲೇ ಕಾಡಾನೆಯನ್ನು ಸ್ಥಳಾಂತರಗೊಳಿಸಲು ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು, ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುವಂತೆ ಸಲಹೆ ನೀಡಿದರು. ಇವರ ಮಾತಿಗೆ ಒಪ್ಪಿದ ರೈತ ಮುಖಂಡರು ಹಾಗೂ ಗ್ರಾಮಸ್ಥರು ಸಮ್ಮತಿ ಸೂಚಿಸಿದರು.
ಈ ವೇಳೆ ಜಿ.ಪಂ.ಮಾಜಿ ಸದಸ್ಯ ಸಿ.ಕೆ.ಬೋಪಣ್ಣ,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮನೆಯಪಂಡ ಸೋಮಣ್ಣ, ಸದಸ್ಯರಾದ ಅಜ್ಜಿಕುಟ್ಟಿರ ಸಜನ್ ಚಂಗಪ್ಪ, ಗ್ರಾಮದ ಪ್ರಮುಖರಾದ ಕಂದಾ ದೇವಯ್ಯ,ರೈತ ಮುಖಂಡರಾದ ಆಲೆಮಾಡ ಮಂಜುನಾಥ್, ಪುಚ್ಚಿಮಾಡ ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು,ಗಿರೀಶ್, ಮುಂತಾದವರು ಹಾಜರಿದ್ದರು. ಮೃತರ ಕುಟುಂಬಕ್ಕೆ ತಾತ್ಕಾಲಿಕ ೨ ಲಕ್ಷ ಪರಿಹಾರ ಚೆಕ್ ಅನ್ನು ಎ.ಸಿ.ಎಪ್.ಉತ್ತಪ್ಪ ಆರ್.ಎಪ್.ಒ. ಹುನಗುಂದ ಸಮ್ಮುಖದಲ್ಲಿ ನೀಡಲಾಯಿತು. ಅಂತ್ಯಕ್ರಿಯೆ ಕಾರ್ಯಕ್ಕೆ ೧೫ ಸಾವಿರ ಹಣವನ್ನು ನಗದು ರೂಪದಲ್ಲಿ ಕೊಡಲಾಯಿತು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.
ವಿಷಯ ತಿಳಿಸಿದ ಶ್ವಾನ..!
ಮೃತಪಟ್ಟ ವ್ಯಕ್ತಿ ರಂಗಸ್ವಾಮಿ ತನ್ನ ಮನೆಯ ನಾಯಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅಲ್ಲದೆ ವಾಯುವಿಹಾರಕ್ಕೆ ಕರೆದುಕೊಂಡು ಹೋಗುವುದು ವಾಡಿಕೆ. ಸೋಮವಾರ ಮುಂಜಾನೆ ಎಂದಿನAತೆ ತಮ್ಮ ಪ್ರೀತಿಯ ನಾಯಿಯೊಂದಿಗೆ ವಾಕಿಂಗ್ ತೆರಳಿದ ರಂಗಸ್ವಾಮಿಯ ಮೇಲೆ ಕಾಡಾನೆ ದಾಳಿ ನಡೆಸಿತು. ಅನತಿ ದೂರಕ್ಕೆ ಎಸೆಯಿತು. ಈ ವೇಳೆ ತನ್ನ ಯಜಮಾನನಿಗೆ ತೊಂದರೆ ಆಗಿರುವುದನ್ನು ಮನಗಂಡು ನಾಯಿಯು ಒಂದೇ ಸಮನೆ ಬೊಗಳಿದೆ. ಇದರಿಂದಾಗಿ ಕಾಡಾನೆ ಸ್ಥಳದಿಂದ ತೆರಳಿ ಕಾಫಿ ತೋಟದತ್ತ ಹೆಜ್ಜೆ ಹಾಕಿದೆ. ಪ್ರೀತಿಯ ನಾಯಿ ವಾಪಾಸು ಓಡಿ ಬಂದು ಮನೆಯವರ ಗಮನ ಸೆಳೆಯಿತು. ನಾಯಿ ಮಾತ್ರ ಬಂದಿರುವುದನ್ನು ನೋಡಿದ ಮನೆಯವರು ಗಾಬರಿಗೊಂಡು ನಾಯಿಯ ಹಿಂದೆ ತೆರಳಿ ನೋಡಿದ ಸಂದರ್ಭ ವಿಷಯ ತಿಳಿದಿದೆ. ನಾಯಿ ಯಜಮಾನನನ್ನು ಕಳೆದುಕೊಂಡು ಒಂದೇ ಸಮನೆ ರೋಧಿಸುತ್ತಿರುವ ದೃಶ್ಯ ಮನಕಲಕುವಂತಿತ್ತು.ಸAತಾಪ: ರಂಗಸ್ವಾಮಿ ಅವರ ನಿಧನಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಚೆಸ್ಕಾಂ ಸಿಬ್ಬಂದಿಗಳು, ಜಿ.ಪಂ.ಮಾಜಿ ಸದಸ್ಯ ಸಿ.ಕೆ.ಬೋಪಣ್ಣ, ಗ್ರಾ.ಪಂ.ಸದಸ್ಯ ಅಜ್ಜಿಕುಟ್ಟಿರ ಸಜನ್, ಸಂತಾಪ ವ್ಯಕ್ತಪಡಿಸಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಎಲೆಕ್ಟಿçಕಲ್ ಹಾಗೂ ಪ್ಲಂಬರ್ ಕೆಲಸ ನಿರ್ವಹಿಸುತ್ತಿದ್ದ ರಂಗಸ್ವಾಮಿ ಗೋಣಿಕೊಪ್ಪ ನಾಡ ಹಬ್ಬ ದಸರಾ ಸಮಿತಿಯ ಸದಸ್ಯ ಹಾಗೂ ಹಾಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೆಲವು ಬಾರಿ ವಾಯುವಿಹಾರಕ್ಕೆ ತೆರಳಿದ ಸಂದರ್ಭ ಕಾಡಾನೆ ಕಾಣಿಸಿಕೊಂಡ ಬಗ್ಗೆ ವಿಚಾರ ತಿಳಿಸಿ, ಎಚ್ಚರಿಕೆಯಿಂದ ಓಡಾಟ ನಡೆಸುವಂತೆ ಗ್ರಾಮಸ್ಥರಿಗೆ ತಿಳಿ ಹೇಳಿದ್ದರು. ರಂಗಸ್ವಾಮಿ ಮೂರು ಗಂಡು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.
- ಹೆಚ್.ಕೆ. ಜಗದೀಶ್