ಸೋಮವಾರಪೇಟೆ, ಮೇ ೨೧: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಳಿನಿ ಗಣೇಶ್ ಬುಧವಾರ ನಿಧನರಾದ ಹಿನ್ನೆಲೆ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಶ್ರದ್ಧಾಂಜಲಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಉಪಾಧ್ಯಕ್ಷ ಬಿ. ಸಂಜೀವ ವಹಿಸಿದ್ದರು. ಪಟ್ಟಣದ ಅಭಿವೃದ್ಧಿಗಾಗಿ ತುಂಬಾ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಅಧ್ಯಕ್ಷರ ಅಗಲಿಕೆ ಪಂಚಾಯಿತಿಗೆ ತುಂಬಲಾರದ ನಷ್ಟವಾಗಿದೆ. ಅವರ ಸುಂದರ ನಗರದ ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಂಜೀವ ಹೇಳಿದರು.

ಈ ಸಂದರ್ಭ ಸದಸ್ಯರಾದ ಪಿ.ಕೆ. ಚಂದ್ರು. ಜೀವನ್, ಶುಭಕರ, ಬಿ.ಆರ್. ಮಹೇಶ್, ಎಸ್. ಮಹೇಶ್, ಎಸ್.ಆರ್. ಸೋಮೇಶ್, ಶರತ್. ಮುಖ್ಯಾಧಿಕಾರಿ ನಾಚಪ್ಪ, ಮತ್ತು ಪೌರಕಾರ್ಮಿಕರು, ಸಿಬ್ಬಂದಿಗಳು ಇದ್ದರು.

ಶ್ರದ್ಧಾಂಜಲಿ: ವಿವಿಧೋದ್ಧೇಶ ಸಹಕಾರ ಸಂಘದಲ್ಲಿ ಬುಧವಾರ ನಿಧನರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಾಗೂ ಸಂಘದ ಮಾಜಿ ಅಧ್ಯಕ್ಷೆ ನಳಿನಿ ಗಣೇಶ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ರಾಮಪ್ರಸಾದ್, ಮಾಜಿ ಅಧ್ಯಕ್ಷ ಶಿವಕುಮಾರ್, ಮೃತ್ಯುಂಜಯ ಹಾಗೂ ಸಿಬ್ಬಂದಿಗಳು ಇದ್ದರು.