ವೀರಾಜಪೇಟೆ, ಮೇ ೧೮: ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಆಟೋರಿಕ್ಷಾ ಹಾಗೂ ನಾಲ್ಕು ಚಕ್ರವಾಹನಗಳ ಸಂಚಾರವನ್ನು ತಾ. ೨೪ರ ತನಕ ಪೂರ್ಣವಾಗಿ ನಿಷೇಧಿಸಿರುವುದಾಗಿ ತಾಲೂಕು ತಹಶೀಲ್ದಾರ್ ಯೋಗಾನಂದ್ ತಿಳಿಸಿದ್ದಾರೆ. ನಿರ್ಧಿಷ್ಟ ಅಗತ್ಯ ಕಾರಣಗಳನ್ನು ನೀಡಿ ತುರ್ತು ಸಂದರ್ಭಗಳಲ್ಲಿ ಸಮಯೋಚಿತವಾಗಿ ದ್ವಿಚಕ್ರ ವಾಹನಗಳನ್ನು ಬಳಸಲು ಅವಕಾಶ ನೀಡಲಾಗಿದೆ ಎಂದು ತಾಲೂಕು ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.