ವೀರಾಜಪೇಟೆ, ಮೇ ೧೮: ಕೊರೊನಾ ಸೋಂಕು ಪತ್ತೆಗೆ ತೆರಳಿದ ಇಲ್ಲಿನ ಕೊರೊನಾ ವಾರಿರ‍್ಸ್ ಹಾಗೂ ಶಿಕ್ಷಕಿಯರ ಸೇವೆಗೆೆ ಅಡ್ಡಿಪಡಿಸಿದ ಆರೋಪದ ಮೇರೆ ಇಲ್ಲಿನ ನಗರ ಪೊಲೀಸರು ಗಾಂಧಿನಗರದ ವಿಷ್ಣುಮೂರ್ತಿ ಎಂಬವರ ವಿರುದ್ಧ ಕ್ರಮಕೈಗೊಂಡಿದ್ದಾರೆ.

ಕರ್ತವ್ಯನಿರತ ರಾಧನ ಹಾಗೂ ಕ್ಲೆöÊಮೇಂಟಿಟನ್ ಇಬ್ಬರು ನಿನ್ನೆ ದಿನ ಗಾಂಧಿನಗರಕ್ಕೆ ದೂರಿನ ಮೇರೆ ತೆರಳಿ ಪ್ರಥಮ ಹಾಗೂ ದ್ವಿತೀಯ ಹಂತದ ಕೊರೊನಾ ಸೋಂಕನ್ನು ಪತ್ತೆಹಚ್ಚಲು ಕೊರೊನಾ ಪಾಸಿಟಿವ್ ವ್ಯಕ್ತಿಯ ಸಂಪರ್ಕವಿರುವ ವಿಷ್ಣುಮೂರ್ತಿಯ ಮೊಬೈಲ್ ನಂಬರನ್ನು ಸಂಗ್ರಹಿಸಿ ಸಂಪರ್ಕಿಸಿದಾಗ ಸೇವೆಗೆ ಅಡ್ಡಿಪಡಿಸಿದರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೆAದು ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಅವರು ನಗರ ಪೊಲೀಸರಿಗೆ ಲಿಖಿತ ದೂರು ನೀಡಿದ್ದರು