ನನ್ನ ಸೇವೆಯ ಬಗ್ಗೆ ಸುಂದರ ಸಂಪಾದಕೀಯ ಬರೆದಿದ್ದೀರ. ನಿಮ್ಮ ವಿಶಾಲ ಮನೋಭಾವದಿಂದಾಗಿ ಪರರ ಸೇವೆಯನ್ನು ಗಮನಿಸಿದ್ದೀರ. ಎಲ್ಲವೂ ದೈವೇಚ್ಛೆ. ‘ಶಕ್ತಿ’ ಕುಟುಂಬ ನನ್ನ ಬಗ್ಗೆ ಹೇಳಿದ ಎಲ್ಲ ಉತ್ತಮ ಮಾತುಗಳನ್ನು ಭಗವಂತನ ಪಾದಾರವಿಂದಗಳಿಗೆ ಅರ್ಪಿಸುವೆ. ನಾನು ಎಲ್ಲ ಶ್ರಮವನ್ನು ಶ್ರೀ ರಾಮಕೃಷ್ಣ ಆಶ್ರಮ ಮತ್ತು ವಿವೇಕಾನಂದರಲ್ಲಿ ಶರಣಾಗಿಯೇ ಮಾಡುವುದು.

ನೀವು ಮೂವರು ಸಹೋದರರೊಂದಿಗಿನ ನನ್ನ ಒಡನಾಟವನ್ನು ಹೆಮ್ಮೆಯಿಂದ ಸ್ಮರಿಸುವೆ. ಭಗವತ್ಪ್ರೇಮಿಗಳಾದ ನಿಮ್ಮ ಆಧ್ಯಾತ್ಮಿಕ ಆಸಕ್ತಿ ನನ್ನೊಂದಿಗೆ ಸಂಬಂಧ ಬೆಳೆಸಿದೆ. ನಿಮ್ಮಲ್ಲಿನ ಆತ್ಮಶಕ್ತಿಯಿಂದಾಗಿ ಪ್ರಕೃತಿ ವಿಕೋಪ ಸಂದರ್ಭ ಒಂದು ಕೋಟಿ ರೂಪಾಯಿಗೂ ಅಧಿಕ ನಷ್ಟವಾದರೂ ಚೇತರಿಸಿಕೊಂಡಿರ. ಭಗವತ್ ಕೃಪೆ ‘ಶಕ್ತಿ’ ಬಳಗದ ಮೇಲೆ ಸದಾ ಇರಲಿ.

- ಸ್ವಾಮಿ ಬೋಧಸ್ವರೂಪಾನಂದ, ಅಧ್ಯಕ್ಷ, ಶ್ರೀ ರಾಮಕೃಷ್ಣ ಶಾರದಾ ಆಶ್ರಮ, ಪೊನ್ನಂಪೇಟೆ.