ಕುಶಾಲನಗರ, ಏ. ೧೯: ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಪಂಚಾಯತ್ ರಾಜ್ ದಿನಾಚರಣೆ ಪ್ರಯುಕ್ತ ಮಡಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಕುಶಾಲನಗರ ತಾಲೂಕು ತಂಡವು ಮಡಿಕೇರಿ ತಾಲೂಕು ತಂಡದ ವಿರುದ್ಧ ಜಯಗಳಿಸಿದೆ.

ಕುಶಾಲನಗರ ತಾಲೂಕು ತಂಡವನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಓ ವೇಣುಗೋಪಾಲ್ ಮತ್ತು ಸಿಬ್ಬಂದಿ ಬಿ.ಎಸ್. ಪುನೀತ್ ಕುಮಾರ್, ಎಸ್.ಎ. ಶ್ರೀನಿವಾಸ್ ವಾಲ್ನೂರು-ತ್ಯಾಗತ್ತೂರು ಪಿಡಿಓ ಅನಿಲ್ ಕುಮಾರ್, ಶಿರಂಗಾಲ ಪಿಡಿಓ ಹರೀಶ್, ತಾಂತ್ರಿಕ ಸಹಾಯಕ ಕಾರ್ತಿಕ್ ಪಂಚಾಯಿತಿಯ ಅಯ್ಯಪ್ಪ ಗ್ರಾಮ ಪಂಚಾಯಿತಿ ಪ್ರತಿನಿಧಿಸಿ ದ್ದರು.