ಮಡಿಕೇರಿ, ಏ. ೧೦: ಮಡಿಕೇರಿ ತಾಲೂಕು ಕೇಂದ್ರ ಸೇವಾದಳ ಸಮಿತಿಯ ಸದಸ್ಯ ಪಾಲಾಕ್ಷ ಅವರು ತಮ್ಮ ಪತ್ನಿ ಕೆ.ಎಸ್. ಚಂದ್ರಮ್ಮ ಅವರ ಪರವಾಗಿ ಕಡಗದಾಳು ಪ್ರೌಢಶಾಲೆಯ ಹತ್ತು ವಿದ್ಯಾರ್ಥಿನಿಯರಿಗೆ ಸಮವಸ್ತç ಹಾಗೂ ಮೂವತ್ತು ವಿದ್ಯಾರ್ಥಿಗಳಿಗೆ ಸೇವಾದಳದ ಟೋಪಿಯನ್ನು ನೀಡಲಾಯಿತು.

ಕಡಗದಾಳು ಸರಕಾರಿ ಪ್ರೌಢಶಾಲೆ ೨೦೦೬ ರಲ್ಲಿ ಸ್ಥಾಪನೆಯಾಗಿದ್ದು, ಪ್ರಸ್ತುತ ೬೮ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಸೇವಾದಳದ ಶಾಖೆ ಇದ್ದರೆ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು, ಭಾಗವಹಿಸುವಿಕೆ, ಸೇವಾಮನೋಭಾವ ಮೊದಲಾದ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂಬ ಉದ್ದೇಶದಿಂದ ೨೦೧೯-೨೦ನೇ ಸಾಲಿನಲ್ಲಿ ಸೇವಾದಳ ಶಾಖೆಯನ್ನು ಪ್ರಾರಂಭಿಸಲಾಯಿತು. ಈ ಶಾಖೆಯಿಂದ ಅನೇಕ ಚಟುವಟಿಕೆಗಳು ಉತ್ತಮವಾಗಿ ನಡೆದಿದೆ. ಆದರೆ ವಿದ್ಯಾರ್ಥಿಗಳಿಗೆ ತಮ್ಮನ್ನು ಗುರುತಿಸಿಕೊಳ್ಳಲು ಅಗತ್ಯವಿರುವ ಸಮವಸ್ತçದ ಕೊರತೆ ಇದ್ದುದನ್ನು ಗಮನಿಸಿ ಸಮವಸ್ತçಗಳನ್ನು ವಿತರಿಸಲಾಯಿತು.