ಗುಡ್ಡೆಹೊಸೂರು, ಏ. ೧೦: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಲ್ಯಾಂಪ್ಸ್ ಸಹಕಾರ ಸಂಘದ ರೂ. ೩೧.೨೦ ಲಕ್ಷ ವೆಚ್ಚದ ಗೋದಾಮು ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ, ಉಪಾಧ್ಯಕ್ಷ ಮನು ಬಿ.ಎನ್., ನಿರ್ದೇಶಕರಾದ ಬಿ.ಆರ್. ಸುರೇಶ್, ಮಹೇಶ್, ಮುಖ್ಯ ಕಾರ್ಯನಿರ್ವಣಾಧಿಕಾರಿ ಹನಿಕುಮಾರ್, ಗ್ರಾ.ಪಂ. ಸದಸ್ಯರಾದ ಎಂ.ಆರ್. ಮಾದಪ್ಪ, ಉಮಾ, ಸೌಮ್ಯ ಇತರರು ಹಾಜರಿದ್ದರು.