ಹೆಬ್ಬಾಲೆ, ಏ. ೭: ವೀರಶೈವ ಲಿಂಗಾಯಿತ ಯುವ ವೇದಿಕೆಯ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಶಿರಂಗಾಲ ಗ್ರಾಮದ ಎಸ್.ಎಂ. ಷಡಕ್ಷರ ಅವರನ್ನು ನೇಮಕ ಮಾಡಲಾಗಿದೆ.

ವೀರಶೈವ ಲಿಂಗಾಯಿತ ಯುವ ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ಅವರು ಷಡಕ್ಷರ ಅವರನ್ನು ನೇಮಕ ಮಾಡಿದ್ದಾರೆ. ಇವರು ಶಿರಂಗಾಲ ಗ್ರಾಮದ ನಿವಾಸಿ ಎಸ್.ಎಸ್. ಮಹೇಶ್ ಹಾಗೂ ಮನೋಜಾಕ್ಷಿ ದಂಪತಿಗಳ ಪುತ್ರ.

ವೀರಶೈವ ಲಿಂಗಾಯಿತ ಯುವ ವೇದಿಕೆ ಕೊಡಗು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್.ಎಂ. ಷಡಕ್ಷರ ಅವರಿಗೆ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಶುಭಹಾರೈಸಿದ್ದಾರೆ.