ಮಡಿಕೇರಿ, ಏ. ೮ : ಮಡಿಕೇರಿ ತಾಲೂಕು ಭಾಗಮಂಡಲ ಮೇಲ್ಸೇತುವೆ ನಿರ್ಮಾಣ ಯೋಜನೆಗೆ ಜಮೀನು ಕಟ್ಟಡಗಳ ಸ್ವಾಧೀನಕ್ಕೆ ಕಾವೇರಿ ನೀರಾವರಿ ನಿಗಮದಿಂದ ಈಗಾಗಲೇ ಕ್ರಮವಹಿಸಿದ್ದು, ಈ ಮೇಲ್ಸೇತುವೆ ನಿರ್ಮಾಣ ಯೋಜನೆಗೆ ಸಂಬAಧಿಸಿದAತೆ ಕೆಲವು ಕಟ್ಟಡ ಹಾಗೂ ಜಮೀನು ಮಾಲೀಕರು ಇನ್ನೂ ಯಾವುದೇ ಸೂಕ್ತ ದಾಖಲೆಗಳನ್ನು ನೀಡದೆ ಪರಿಹಾರ ಪಡೆಯದಿರುವುದು ಕಂಡು ಬಂದಿರುತ್ತದೆ.

ಆದ್ದರಿAದ ಈ ಕೂಡಲೇ ವಿಶೇಷ ಭೂಸ್ವಾಧೀನಾಧಿಕಾರಿ, ಕಬಿನಿ ಜಲಾಶಯ ಯೋಜನೆ, ಮೈಸೂರು ಕಚೇರಿ ಅಥವಾ ಕಾರ್ಯಪಾಲಕ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ ನಿಯಮಿತ, ಹಾರಂಗಿ ಪುನರ್‌ವಸತಿ ವಿಭಾಗ, ಕುಶಾಲನಗರ ಇವರಿಗೆ ಸಲ್ಲಿಸಿ ಪರಿಹಾರ ಪಡೆಯಲು ತಿಳಿಸಿದೆ. ಇಲ್ಲವಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಕಬಿನಿ ಜಲಾಶಯ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ತಿಳಿಸಿದ್ದಾರೆ.