ಮಡಿಕೇರಿ, ಏ. ೮: ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ತನ್ನ ಕಾರ್ಯಕ್ರಮದಡಿ ಕೊಡವ ತರ್ಜುಮೆ ಪೈಪೋಟಿ ನಡೆಸಲು ಉದ್ದೇಶಿಸಿದ್ದು, ಆ ಪ್ರಯುಕ್ತ ಕವನ ತರ್ಜುಮೆ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧಿಗಳು ಯಾವುದೇ ಭಾಷೆಯ ಕವನವನ್ನು ಕೊಡವ ಭಾಷೆಗೆ ಅನುವಾದಿಸಬಹುದು. ಆಸಕ್ತರು ಅನುವಾದಿತ ಕೊಡವ ಕವನದೊಂದಿಗೆ ಮೂಲ ಕವನವನ್ನು ಸಾಹಿತ್ಯ ಅಕಾಡಮಿಯ ವಿಳಾಸಕ್ಕೆ ತಾ. ೨೦ ರ ಒಳಗೆ ಕಳುಹಿಸಿಕೊಡಬೇಕು. ಭಾಗವಹಿಸುವವರಿಗೆ ವಯಸ್ಸಿನ ಮಿತಿ ಇರುವುದಿಲ್ಲ. ವಿಜೇತರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಕಚೇರಿಯ ವೆಬ್‌ಸೈಟ್ ಞoಜಚಿvಚಿ.ಚಿಛಿಚಿಜಚಿmಥಿ@gmಚಿiಟ.ಛಿom, ಕರ್ನಾಟಕ ಕೊಡವ ಅಕಾಡೆಮಿ ಜೂನಿಯರ್ ಕಾಲೇಜು ರಸ್ತೆ, ಮ್ಯಾನ್ಸ್ ಕಾಂಪೌAಡ್ ಹತ್ತಿರ, ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಮಡಿಕೇರಿ-೫೭೧೨೦೧ ದೂ. ೦೮೨೭೨-೨೨೯೦೭೪ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.