*ಸಿದ್ದಾಪುರ, ಏ. ೪: ಅಭ್ಯತ್‌ಮಂಗಲದ ಶ್ರೀವೈದ್ಯನಾಥ ದೈವರಾಜ ಕೋಟೆದ ಬಬ್ಬು ಸ್ವಾಮಿ ಸೇವಾ ಸಮಿತಿ ವತಿಯಿಂದ ಶ್ರೀವೈದ್ಯನಾಥೇಶ್ವರ ದೈವಸ್ಥಾನದ ವಾರ್ಷಿಕೋತ್ಸವ ಹಾಗೂ ನೇಮೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಶ್ರೀವೈದ್ಯನಾಥ ಸ್ವಾಮಿಯ ಭಂಡಾರ ಹೇರಿಕೆ ಕೋಟೆದ ಬಬ್ಬುಸ್ವಾಮಿ, ತಂಗಡಿ ತನ್ನಿಮಾನಿಗ, ಶ್ರೀಚಾಮುಂಡೇಶ್ವರಿ, ಕತ್ತಲಕಾನದ ಗುಳಿಗ, ಜಾಗದ ಗುಳಿಗ ಹಾಗೂ ಪಂಜುರ್ಲಿ ಗುಳಿಗ ನೇಮೋತ್ಸವ ನಡೆಯಿತು.

ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯ ಸಮಿತಿಯ ಅಧ್ಯಕ್ಷ ಮಿಥುನ್ ನಾರಾಯಣ, ಪ್ರಮುಖರಾದ ಚೇತನ್, ಜೀವನ್, ದಾಮು, ವಿಶ್ವನಾಥ್, ಲಿಂಗಪ್ಪ, ಚಂದು, ಕೇಶವ ಮತ್ತಿತರರು ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು.