ಶನಿವಾರಸಂತೆ, ಏ. ೨: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಯಳ್ಳಿ ಗ್ರಾಮದಲ್ಲಿ ೧೫ ದಿನಗಳಿಂದ ಕುಡಿಯವ ನೀರಿನ ಸಮಸ್ಯೆ ತಲೆದೋರಿದ್ದು, ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಖಾಲಿ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಸಮಸ್ಯೆಗೆ ಪಂಚಾಯಿತಿ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಸ್ಪಂದಿಸಲಿಲ್ಲ. ಮನವಿ ಮಾಡಿದರೂ ಮೋಟಾರು ದುರಸ್ತಿಗೆ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದ್ದಾರೆ. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಲೋಕೇಶ್, ಹೂವಣ್ಣ, ರೂಪಾ, ಆಶಾ, ಸುಶೀಲಾ, ಮಂಜುನಾಥ್, ಚಂದನ್, ವಿನೋದ್, ಲತಾ, ಡಿ.ಈ. ಶಿವಪ್ಪ ಪಾಲ್ಗೊಂಡಿದ್ದರು.