ಸಿದ್ದಾಪುರ, ಏ. ೧: ಮನೆಯ ಕೋಣೆಯಲ್ಲಿದ್ದ ವಿಷಪೂರಿತ ಹಾವೊಂದನ್ನು ಸೆರೆ ಹಿಡಿಯುವಲ್ಲಿ ಉರಗಪ್ರೇಮಿ ಸುರೇಶ್ ಪೂಜಾರಿ ಯಶಸ್ವಿಯಾಗಿದ್ದಾರೆ. ಗುಹ್ಯ ಗ್ರಾಮದ ಕೂಡುಗದ್ದೆಯ ರೂಪೇಶ್ ಎಂಬವರ ಮನೆಯ ಒಳಗಿನ ಕೋಣೆಯಲ್ಲಿ ಮಧ್ಯರಾತ್ರಿ ವಿಷಪೂರಿತ ಹಾವೊಂದು ಮಲಗಿರುವುದನ್ನು ಕಂಡು ಭಯಭೀತರಾದ ಮನೆಯವರು ಉರಗ ಪ್ರೇಮಿ ಗುಹ್ಯದ ಸುರೇಶ್ ಪೂಜಾರಿಯನ್ನು ಕರೆಸಿದರು. ಸುರೇಶ್ ಹಾವನ್ನು ಹಿಡಿದು ಸಮೀಪದ ಅರಣ್ಯಕ್ಕೆ ಬಿಟ್ಟರು.