ಸೋಮವಾರಪೇಟೆ, ಮಾ. ೨೬: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದ ನವಜ್ಯೋತಿ ಸ್ತಿçà ಶಕ್ತಿ ಸಂಘದ ೨೦ನೇ ವಾರ್ಷಿಕೋತ್ಸವ, ಸ್ತಿçà ಶಕ್ತಿ ಭವನದಲ್ಲಿ ನಡೆಯಿತು. ೧೭ ವರ್ಷಗಳಿಂದ ಸಂಘದ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿದ ಬಿ.ಸಿ. ಇಂದಿರಾವತಿ ಹಾಗೂ ಸಿದ್ದಮ್ಮ, ಹಿರಿಯ ಸದಸ್ಯೆ ಮೈಮುನ ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಕೆ. ಅನಿತ ದಿನೇಶ್ ವಹಿಸಿದ್ದರು. ದೇವಿಕಾ ವಿನೋದ್ ಕಾರ್ಯಕ್ರಮ ನಿರ್ವಹಿಸಿದರು. ವಾರ್ಷಿಕೋತ್ಸವ ಪ್ರಯುಕ್ತ ಅಂಗನವಾಡಿ ಕೇಂದ್ರದಲ್ಲಿ ಶ್ರಮದಾನ ನಡೆಸಿ, ಆವರಣವನ್ನು ಶುಚಿಗೊಳಿಸಲಾಯಿತು.