ನಾಪೋಕ್ಲು, ಮಾ. ೨೫: ಸ್ಥಳೀಯ ಮಹಿಳಾ ಸಮಾಜದ ಬಳಿ ವಿದ್ಯುತ್ ತಂತಿಯ ನಡುವೆ ಮರದ ರೆಂಬೆಗಳು ಬೆಳೆದಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಿದೆ.

ಮಹಿಳಾ ಸಮಾಜದಲ್ಲಿ ವಿಶೇಷ ಚೇತನ ಮಕ್ಕಳ ಶಾಲೆ, ಸ್ತಿçà ಶಕ್ತಿ, ಸ್ವಸಹಾಯ ಸಂಘಗಳ ಸಭೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಜನ ಹೆಚ್ಚಾಗಿ ಇಲ್ಲಿ ನಡೆದಾಡುತ್ತಿರುತ್ತಾರೆ. ಅನಾಹುತ ಸಂಭವಿಸುವ ಮೊದಲು ವಿದ್ಯುತ್ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. - ಪಿ.ವಿ. ಪ್ರಭಾಕರ್