ಗೋಣಿಕೊಪ್ಪ ವರದಿ, ಮಾ. ೧೯: ಅಮ್ಮತ್ತಿ-ಕಾರ್ಮಾಡು ಸಂಜೀವಿನಿ ಒಕ್ಕೂಟದಿಂದ ಅಮ್ಮತ್ತಿ ಸರ್ಕಾರಿ ಶಾಲಾ ಮೈದಾನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಒಕ್ಕೂಟದ ಸದಸ್ಯರಿಗೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ನಡೆಯಿತು.
ಒಕ್ಕೂಟದ ಸುಮಾರು ೧೫೦ಕ್ಕೂ ಹೆಚ್ಚು ಸದಸ್ಯರು ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಶಾಲೆಯ ಶಿಕ್ಷಕರಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆ ನಡೆಸಲಾಯಿತು.
ಸೂಜಿಗೆ ದಾರ ಹಾಕುವುದು, ಮ್ಯೂಸಿಕಲ್ ಚೇರ್, ಭಾರದ ಗುಂಡು ಎಸೆಯುವುದು ಕ್ರೀಡಾಕೂಟಗಳು ನಡೆದವು. ಹಗ್ಗಜಗ್ಗಾಟದಲ್ಲಿ ವಿಶಾಲಾಕ್ಷಿ ತಂಡ ಪ್ರಥಮ, ವಿದ್ಯಾ ಹಾಗೂ ತಂಡ ದ್ವಿತೀಯ, ಥ್ರೋಬಾಲ್ನಲ್ಲಿ ವನಜಾಕ್ಷಿ ತಂಡ ಪ್ರಥಮ, ಸರೋಜಿನಿ ತಂಡ ದ್ವಿತೀಯ, ವೇಗದ ನಡಿಗೆಯಲ್ಲಿ ವಿಶಾಲಾಕ್ಷಿ ಪ್ರಥಮ, ೫೦ ವಯೋಮಿತಿಯ ನಡಿಗೆಯಲ್ಲಿ ಯಮುನಾ ಪ್ರಥಮ, ಯಶೋಧಾ ದ್ವಿತೀಯ, ಮಡಿಕೆ ಒಡೆಯುವುದರಲ್ಲಿ ನಸೀರಾ ಬಹುಮಾನ ಪಡೆದುಕೊಂಡರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಒಕ್ಕೂಟದ ವನಜಾಕ್ಷಿ, ಸಂಪನ್ಮೂಲ ವ್ಯಕ್ತಿ ಪಿ.ಜಿ. ವಿದ್ಯಾ, ಉಪಾಧ್ಯಕ್ಷೆ ಮಿನಿತಾ, ಕಾರ್ಯದರ್ಶಿ ಸವಿತಾ ಇತರರಿದ್ದರು. ಕ್ರೀಡಾಕೂಟವನ್ನು ಕಾರ್ಮಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುಕ್ಕಾಟೀರ ಸಂತೋಷ್ ಉದ್ಘಾಟಿಸಿದರು. ಪಿಡಿಒ ತಿಮ್ಮಯ್ಯ ಇದ್ದರು.