ಕುಶಾಲನಗರ, ಮಾ. ೮: ಕುಶಾಲನಗರದ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಯಂತ್ರದಲ್ಲಿ ದೊರೆತ ಹಣವನ್ನು ಮಾಲೀಕರಿಗೆ ಮರಳಿ ನೀಡಿ ಪ್ರಾಮಾಣಿಕತೆ ಮೆರೆದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಣಿಕAಠ ಎಂಬವರಿಗೆ ಬ್ಯಾಂಕ್ ಆಫ್ ಬರೋಡ ಶಾಖೆಯ ಎಟಿಎಂನಲ್ಲಿ ೯೫೦೦ ರೂ ನಗದು ದೊರಕಿತ್ತು. ಅದನ್ನು ಬ್ಯಾಂಕ್ ಮೇನೇಜರ್ ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಹಣ ಕಳೆದುಕೊಂಡ ಟಿಬೇಟಿಯನ್ ವ್ಯಕ್ತಿಗೆ ಮಣಿಕಂಠ ಅವರು ಹಸ್ತಾಂತರ ಮಾಡಿದ್ದಾರೆ.