ಶನಿವಾರಸಂತೆ, ಮಾ. ೧: ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಪೌರಕಾರ್ಮಿಕರು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಶನಿವಾರಸಂತೆ ಗ್ರಾಮ ಪಂಚಾಯಿತಿಯ ಪೌರಕಾರ್ಮಿಕ ಸುದೀಪ್ ಹಾಗೂ ಚಂದು ಇವರಿಬ್ಬರು ಸ್ಕೂಟಿಯಲ್ಲಿ ಸಂತೆ ಮಾರುಕಟ್ಟೆಯಲ್ಲಿ ಮನೆಯ ಸಾಮಗ್ರಿ ತರಲು ಹೋಗುತ್ತಿರುವಾಗ ಮಾರುಕಟ್ಟೆ ಕಡೆಯಿಂದ ಬಂದ ಸ್ಕೂಟಿ ಚಾಲಕ ವೇಗÀವಾಗಿ ಮತ್ತು ಬಂದು ಡಿಕ್ಕಿಪಡಿಸಿದ ಪರಿಣಾಮ ಸುದೀಪ್‌ನಿಗೆ ಹಣೆ ಹಾಗೂ ಮೂಗಿಗೆ ಗಾಯವಾಗಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೋರ್ವನಿಗೆ ಸಣ್ಣಪುಟ್ಟ ಗಾಯವಾಗಿದೆ.

ಈಚಲು ಬೀಡು ಗ್ರಾಮದ ಸುಮಂತ್ ಡಿಕ್ಕಿಪಡಿಸಿದ ಸ್ಥಳದಲ್ಲಿ ಸ್ಕೂಟರ್ ನಿಲ್ಲಸದೇ ಪರಾರಿಯಾಗಿದ್ದಾನೆ. ಗಾಯಗೊಂಡ ಚಂದು ಅವರನ್ನು ಶನಿವಾಸರಂತೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲುಗೊಳಿಸಲಾಗಿದೆ. ಚಂದು ಅವರ ಸಂಬAಧಿ ಶ್ವೇತಾ ಶನಿವಾರಸಂತೆ ಪೊಲೀಸರ ಠಾಣೆಗೆ ನೀಡಿದ ದೂರಿನ ಮೇರೆ ಠಾಣಾಧಿಕಾರಿ ಹೆಚ್.ಇ. ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಸ್ಕೂಟರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.