ಗುಡ್ಡೆಹೊಸೂರು, ಫೆ. ೨೪: ಇಲ್ಲಿನ ಸಮುದಾಯಭವನದಲ್ಲಿ ಪಂಡಿತ್ ದೀನ್‌ದಯಾಳ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ನಡೆಸಲಾಯಿತು. ಜನಸಂಘ ಮುಂದೆ ಭಾರತೀಯ ಜನತಾಪಕ್ಷವಾಗಿ ಬೆಳೆಯಲು ದಯಾಳ್ ಅವರ ಪಾತ್ರದ ಬಗ್ಗೆ ಮತ್ತು ದಯಾಳ್ ಅವರ ಜೀವನ ಚರಿತ್ರೆಯ ಬಗ್ಗೆ ಭಾರತೀಶ್ ವಿವರವಾಗಿ ಮಾತನಾಡಿದರು.

ಸಭೆಯಲ್ಲಿ ಈ ವಿಭಾಗದ ಪಕ್ಷದ ಉಸ್ತುವಾರಿ ಮೋಹನ್ ದಾಸ್ ಮತ್ತು ಇಂದಿರಾ ರಮೇಶ್ ಅವರು ಭಾಗವಹಿಸಿದ್ದರು. ನೂತನವಾಗಿ ಆಯ್ಕೆಯಾದ ಪಂಚಾಯಿತಿ ಅಧ್ಯಕ್ಷೆ ನಂದಿನಿ ದೇವರಾಜ್ ಮತ್ತು ಉಪಾಧ್ಯಕ್ಷೆ ಡಿ.ಜೆ. ಯಶೋಧ, ಬಿ.ಜೆ.ಪಿ ಪಕ್ಷದ ಎಲ್ಲಾ ನೂತನ ಸದಸ್ಯರು ಹಾಗೂ ಜಿಲ್ಲಾ ಕಾರ್ಯದರ್ಶಿ ಪುಷ್ಪನಾಗೇಶ್ ಹಾಗೂ ಪ್ರಮುಖರಾದ ಜಿ.ಎಂ. ಮಣಿಕುಮಾರ್, ಎಂ.ಆರ್. ಉತ್ತಪ್ಪ ಇಲ್ಲಿನ ಶಕ್ತಿ ಕೇಂದ್ರದ ಪ್ರಮುಖ ಕುಡೆಕಲ್ ನಿತ್ಯ ಹಾಗೂ ಪ್ರವೀಣ್ ಅವರು ಹಾಜರಿದ್ದು, ಸ್ವಾಗತಿಸಿದರು. ತಾ.ಪಂ. ಸದಸ್ಯೆ ಪುಷ್ಪ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಅವರು ಸ್ವಾಗತಿಸಿದರು.