ಹೇರೂರಿನಲ್ಲಿ ಪ್ರತ್ಯಕ್ಷ....!ಕುಶಾಲನಗರ ಸಮೀಪದ ಮೀಸಲು ಅರಣ್ಯದ ಅಂಚಿನಲ್ಲಿ ಹುಲಿಯೊಂದು ಪ್ರತ್ಯಕ್ಷ ವಾದ ಘಟನೆ ವರದಿಯಾಗಿದೆ. ಅತ್ತೂರು ಮೀಸಲು ಅರಣ್ಯ ವ್ಯಾಪ್ತಿಯ ಹೇರೂರು ಮಾರ್ಗದಲ್ಲಿ ಹುಲಿಯೊಂದು ರಸ್ತೆ ಬದಿಯಲ್ಲಿ ಪ್ರತ್ಯಕ್ಷಗೊಂಡಿದೆ. ಈ ಸಂದರ್ಭ ಅರಣ್ಯ ನಡುವೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ದಂಪತಿಗಳು ಅಪಾಯದಿಂದ ಪಾರಾಗಿದ್ದಾರೆ. ಬೈಕ್‌ನಲ್ಲಿ ಸಂಚರಿಸುತ್ತಿದ್ದ ಹೇರೂರಿನಲ್ಲಿ ಪ್ರತ್ಯಕ್ಷ....!(ಮೊದಲ ಪುಟದಿಂದ) ದಂಪತಿಗಳಿಗೆ ಹೇರೂರು ಬಳಿ ಮಾರ್ಗಮಧ್ಯೆ ಎದುರಾದ ವ್ಯಾಘ್ರ ಘರ್ಜಿಸಿದ ಸಂದರ್ಭ ಇದರಿಂದ ಬೆದರಿದ ದಂಪತಿಗಳು ಕೂಡಲೇ ಕಿರುಚಿಕೊಂಡ ಕಾರಣ ಹುಲಿ ಅಲ್ಲಿಂದ ಹಿಂತಿರುಗಿದೆ ಎಂದು ಬೈಕ್ ಚಾಲಿಸುತ್ತಿದ್ದ ಅರ್ಕೇಶ್ ರೆಡ್ಡಿ ತಿಳಿಸಿದ್ದಾರೆ.ಸಮಯಪ್ರಜ್ಞೆಯಿಂದ ಸ್ಥಳದಿಂದ ಪಾರಾಗುವಲ್ಲಿ ದಂಪತಿಗಳು ಯಶಸ್ವಿಯಾಗಿದ್ದಾರೆ. ಸೋಮವಾರ ಬೆಳಗ್ಗೆ ಹೇರೂರಿನಿಂದ ಕುಶಾಲನಗರ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುವ ಸಂದರ್ಭ ಈ ಘಟನೆ ನಡೆಯಿತು ಎಂದು ತಿಳಿಸಿರುವ ಲೋಕೋಪಯೋಗಿ ಇಲಾಖೆ ನೌಕರರಾಗಿರುವ ಅರ್ಕೇಶ್ ರೆಡ್ಡಿ ಇನ್ನೂಭಯದ ವಾತಾವರಣದಿಂದ ಹೊರ ಬಂದಿಲ್ಲ ಎಂದು ತಮ್ಮ ಅನುಭವ ಹಂಚಿಕೊAಡಿದ್ದಾರೆ.

ಘಟನೆಗೆ ಸಂಬAಧಿಸಿದAತೆ ಭಾರೀ ಗಾತ್ರದ ಹುಲಿಯ ಪತ್ತೆ ಕಾರ್ಯಕ್ಕೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಅರ್ಕೇಶ್ ರೆಡ್ಡಿ ತಿಳಿಸಿದ್ದಾರೆ. ವಿಷಯ ಹೊರ ಬರುತ್ತಿದ್ದಂತೆ ಹೇರೂರು ವ್ಯಾಪ್ತಿಯ ಜನತೆ ಆತಂಕಕ್ಕೆ ಒಳಗಾಗಿದ್ದು ಅರಣ್ಯ ಅಂಚಿನಲ್ಲಿ ಓಡಾಡಲು ಭಯಪಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. -ಚಂದ್ರಮೋಹನ್