ಮಡಿಕೇರಿ, ಫೆ. ೨೩: ಮೂಲತಃ ತಲಕಾವೇರಿಯವರಾಗಿದ್ದು, ಪ್ರತಿಷ್ಠಿತ ಆಚಾರ್ ಕುಟುಂಬದ ಸದಸ್ಯರಾಗಿದ್ದ ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿರುವ ಲೇಖಕ ಜಯಪ್ರಕಾಶ್ ಅವರಿಗೆ ಇತ್ತೀಚೆಗೆ ಜರುಗಿದ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ವೇಳೆ ಕನ್ನಡ ಸಿರಿ ಪುರಸ್ಕಾರವನ್ನು ನೀಡಿ ಗೌರವಿಸ ಲಾಯಿತು. ಸಿಂಡಿಕೇಟ್ ಬ್ಯಾಂಕ್, ಕೇಂದ್ರ ರಕ್ಷಣೆ ಹಾಗೂ ಸಂಶೋಧನೆ ಇಲಾಖೆಯ, ಬೆಂಗಳೂರಿನ ಪ್ರತಿಷ್ಠಿತ ಎ.ಡಿ.ಏ. ಹಾಗೂ ಡಿ.ಆರ್.ಡಿ.ಓ. ಸಂಸ್ಥೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಡಾ. ಕಲಾಂ ಅವರ ಸಮನ್ವಯ ಹಾಗೂ ಶಿಷ್ಟಾಚಾರ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಶ್ರೀರಾವ್ ಬರವಣಿಗೆಯನ್ನು ಹವ್ಯಾಸವಾಗಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇವುಗಳಲ್ಲಿ ಮೊದಲಿನ ೩ ಪುಸ್ತಕಗಳು ಅನೇಕ ಬಾರಿ ಮರು ಮುದ್ರಣಗೊಂಡಿವೆ.