ಕಡಂಗ, ಫೆ. ೨೨: ಎಸ್.ಕೆ.ಎಸ್.ಎಸ್.ಎಫ್. ಸ್ಥಾಪಕ ದಿನದ ಪ್ರಯುಕ್ತ ಎಸ್.ಕೆ.ಎಸ್.ಎಸ್.ಎಫ್. ಕುಂಜಿಲ ಶಾಖೆ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಪ್ರಾರ್ಥನೆ ಮತ್ತು ಉದ್ಘಾಟನೆಯನ್ನು ಹುಸೈನ್ ಉಸ್ತಾದ್ ನೆರವೇರಿಸಿ, ಯುವಕರು ಈ ಸಂಘಟನೆಗೆ ಕಳಂಕವನ್ನು ಉಂಟು ಮಾಡದೆ ಇತರರಿಗೆ ತೊಂದರೆಯನ್ನು ಉಂಟುಮಾಡದೆ ಉತ್ತಮವಾಗಿ ಬೆಳೆಸಬೇಕೆಂದರು. ಧ್ವಜಾರೋಹಣವನ್ನು ಎಸ್.ವೈ.ಎಸ್ ಅಧ್ಯಕ್ಷ ಹಮೀದ್ ಫೈಝಿ ನೆರವೇರಿಸಿದರು

ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಹೈಬ್ ಫೈಝಿ ಮುಖ್ಯ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್. ಕುಂಜಿಲ ಶಾಖೆಯ ಅಧ್ಯಕ್ಷ ಹನೀಫ ವಹಿಸಿದ್ದರು. ಹಿರಿಯರಾದ ಅಬ್ದುಲ್ ರಹ್ಮಾನ್ ಹಾಜಿ, ಎಸ್.ವೈ.ಎಸ್. ಕೋಶಾಧಿಕಾರಿ ಹಂಸ ವಯಕೋಲ್, ಹಂಸ ಏರತ್, ಕುಂಜಿಲ ಪಯ್‌ನರಿ ಜಮಾಅತ್ ಸಮಿತಿ ಸದಸ್ಯರಾದ ರಶೀದ್ ಪಯ್ಯಡಿ, ಎಸ್.ಕೆ.ಎಸ್.ಎಸ್.ಎಫ್. ಶಾಖಾ ಕಾರ್ಯದರ್ಶಿ ಶಾಕಿರ್ ಪಾಯಡತ್, ಕೋಶಾಧಿಕಾರಿ ಇರ್ಷಾದ್ ಎ.ಇ., ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಎಸ್.ಕೆ.ಎಸ್.ಎಸ್.ಎಫ್. ಉಪಾಧ್ಯಕ್ಷ ರಫೀಕ್ ಮುಸ್ಲಿಯಾರ್ ಸ್ವಾಗತಿಸಿ, ವಲಯ ಕಾರ್ಯದರ್ಶಿ ಸಹೀದ್ ಅನ್ವರ್ ವಂದಿಸಿದರು.