ನಾಪೋಕ್ಲು, ಫೆ. ೨೧: ಸಮೀಪದ ನೆಲಜಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸುಮಾರು ರೂ. ೧.೩೫ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬ್ಯಾಂಕ್ ಕಟ್ಟಡ ಸಮುಚ್ಚಯಗಳ ಉದ್ಘಾಟನಾ ಸಮಾರಂಭದಲ್ಲಿ ಸಂಘಕ್ಕೆ ಸೇವೆ ಸಲ್ಲಿಸಿದ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಪಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಚಿರೋಟಿರ ಎಂ. ಪೂಣಚ್ಚ, ಬೊಟ್ಟೋಳಂಡ ಎಂ. ಗಣಪತಿ, ಬೊಟ್ಟೋಳಂಡ ಡಿ. ಬಿದ್ದಯ್ಯ, ಬದ್ದಂಜ್ಜೆಟ್ಟಿರ ಸಿ. ಕುಂಞಪ್ಪ, ಮಂಡೀರ ಕಾಳಪ್ಪ, ಚಿರೋಟಿರ ಎಂ. ತಮ್ಮಯ್ಯ, ನುಚ್ಚಿಮಣಿಯಂಡ ಎಂ. ಉತ್ತಪ್ಪ, ಮಂಡೀರ ಎಂ. ಪೊನ್ನಣ್ಣ, ಮತ್ತು ಅಪ್ಪಚ್ಚಿರ ಎಂ. ಕಮಲ ಮುತ್ತಣ್ಣ ಅವರನ್ನು ಆಡಳಿತ ಮಂಡಳಿಯಿAದ ಸನ್ಮಾನಿಸಲಾಯಿತು.