ಕೂಡಿಗೆ, ಫೆ. ೧೫: ಕೂಡ್ಲೂರು-ಕೂಡುಮಂಗಳೂರು ದೊಡ್ಡಮ್ಮ ತಾಯಿ ದೇವಸ್ಥಾನ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡಿರುವ ದೊಡ್ಡಮ್ಮ ತಾಯಿ ದೇವಾಲಯದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮವು ತಾ. ೧೩ ರಿಂದ ಆರಂಭಗೊAಡಿದ್ದು, ೧೭ರ ವರೆಗೆ ನಡೆಯಲಿದೆ. ಈ ಸಂಬAಧ ಪೂಜಾ ಕಾರ್ಯಕ್ರಮ ದೇವಾಲಯದ ಆವರಣದಲ್ಲಿ ಅರಂಭವಾಗಿದೆ.

ತಾ. ೧೭ ರಂದು ಬ್ರಹ್ಮ ಕಲಶೋತ್ಸವ ಕಾರ್ಯಕ್ರಮವನ್ನು ಹರಿಹರ ತಾಲೂಕಿನ ರಾಜನ ಹಳ್ಳಿಯ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂ ಮಹಾಸ್ವಾಮಿ, ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ.

ಗಣಪತಿ ಹೋಮ, ವಾಲ್ಮೀಕಿ ಪ್ರಸನ್ನಾನಂ ಮಹಾಸ್ವಾಮಿ, ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ.

ಗಣಪತಿ ಹೋಮ, ಪ್ರತಿಷ್ಠಾಹೋಮ, ನೂತನ ಗುಡಿಯಲ್ಲಿ ದೊಡ್ಡಮ್ಮ ದೇವರ ಪ್ರತಿಷ್ಠೆ ನಂತರ ಕುಂಬಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ದೇವಾಲಯದ ಆವರಣದಲ್ಲಿ ನಡೆಯಲಿವೆ. ಪೂಜಾ ಕೈಂಕರ್ಯಗಳನ್ನು ವೇದ ಬ್ರಹ್ಮ ಗೋಪಾಲಕೃಷ್ಣ ಕೆದಿಲಾಯ ಅವರ ತಂಡ ನೆರವೇರಿಸಲಿದ್ದಾರೆ ಎಂದು ಕಾರ್ಯದರ್ಶಿ ಪರಮೇಶ್ವರಪ್ಪ ತಿಳಿಸಿದ್ದಾರೆ.

ಕಾವೇರಿ ನದಿಯಿಂದ ೧೭೫ ಕಳಸಗಳಿಂದ ಗಂಗೆಯನ್ನು ತರಲಾಗಿದೆ. ಅದರ ಮೂಲಕ ವಿವಿಧ ಹೋಮ ಹವನ ಕಾರ್ಯಕ್ರಮಗಳು ಮತ್ತು ಎರಡೂ ಗ್ರಾಮಗಳ ಗ್ರಾಮಸ್ಥರಿಗೆ ಅನ್ನದಾನ ಪ್ರಸಾದ ವಿನಿಯೋಗ ನೆಡೆಯುತ್ತಿದೆ.