ಸಿದ್ದಾಪುರ, ಫೆ. ೧೩: ಅಮ್ಮತ್ತಿ ಕಾರ್ಮಾಡು ಗ್ರಾಮದ ಶ್ರೀ ಕಲ್ಲುರ್ಟಿ ಪಾಷಾಣಮೂರ್ತಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ವಿಜೃಂಭಣೆಯಿAದ ನಡೆಯಿತು. ಪಾಷಾಣ ಮೂರ್ತಿ ಹಾಗೂ ಪಂಜುರ್ಲಿ, ಅಣ್ಣಪ್ಪ ಸ್ವಾಮಿ, ಗುಳಿಗ, ದೇವರುಗಳ ಜೋಡಿ ತೆರೆಗಳು ನಡೆದವು. ಭಕ್ತಾದಿಗಳ ಮನಸೂರೆಗೊಂಡಿತು. ತೆರೆ ಮಹೋತ್ಸವ ಅಂಗವಾಗಿ ದೇವಾಲಯದ ಸುತ್ತಮುತ್ತಲೂ ವಿದ್ಯುತ್ ಅಲಂಕೃತದಿAದ ಸಿಂಗರಿಸಲಾಗಿತ್ತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯದ ಪ್ರಮುಖರಾದ ಕುಟ್ಟಂಡ ಲೋಕೇಶ್, ಅಶೋಕ್ ಹಾಗೂ ಇನ್ನಿತರರು ಹಾಜರಿದ್ದರು.