ಶ್ರೀಮಂಗಲ, ಜ. ೨೧: ಶ್ರೀಮಂಗಲ ಮಾಜಿ ಸೈನಿಕರ ಸಂಘಕ್ಕೆ ಸಮುದಾಯ ಭವನ ನಿರ್ಮಿಸಲು ಟಿ. ಶೆಟ್ಟಿಗೇರಿಯಲ್ಲಿ ಗುರುತಿಸಿರುವ ೫ ಸೆಂಟ್ ನಿವೇಶನವನ್ನು ಮಂಜೂರು ಮಾಡಿಕೊಡುವಂತೆ ಇತ್ತೀಚೆಗೆ ಜಿಲ್ಲಾಧಿಕಾರಿಗಳಿಗೆ ಸಂಘದಿAದ ಮನವಿ ಸಲ್ಲಿಸಲಾಯಿತು.

ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ವಿನ್ಸೆಂಟ್ ಡಿಸೋಜ ಅವರು ಟಿ. ಶೆಟ್ಟಿಗೇರಿಯಲ್ಲಿ ಸಂಘದ ಸ್ವಾಧೀನದಲ್ಲಿರುವ ನಿವೇಶನವನ್ನು ಪರಿಶೀಲನೆ ಮಾಡಿದ್ದು, ಇಲಾಖೆಯ ವತಿಯಿಂದ ಮಂಜೂರಾತಿಗೆ ಕ್ರಮ ಕೈಗೊಳ್ಳುವಂತೆ ಕಡತ ವಿಲೇವಾರಿಗೆ ಸೂಚಿಸಿದ್ದರು. ತದನಂತರ ಈ ನಿವೇಶನದಲ್ಲಿ ಮಾಜಿ ಸೈನಿಕರ ಸಂಘದ ಸಮುದಾಯ ಭವನದ ಕಟ್ಟಡವನ್ನು ನಿರ್ಮಿಸಲಾಗಿದೆ. ಆದ್ದರಿಂದ ಈ ನಿವೇಶನವನ್ನು ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಹೆಸರಿಗೆ ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಪತ್ರ ನೀಡಲಾಗಿದೆ. ಸದರಿ ಜಾಗವನ್ನು ಶೀಘ್ರದಲ್ಲಿಯೇ ಇಲಾಖೆಯಿಂದ ಪರಿಶೀಲಿಸಿ ಮಂಜೂರಾತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ತಿಳಿಸಿದರು.

ಜಿಲ್ಲಾಧಿಕಾರಿ ಭೇಟಿ ವೇಳೆ ಸಂಘದ ಉಪಾಧ್ಯಕ್ಷ ಮನ್ನೇರ ರಮೇಶ್, ಉಳುವಂಗಡ ಗಣಪತಿ, ನಿರ್ದೇಶಕರುಗಳಾದ ಚಂಗುಲAಡ ಸತೀಶ್, ಮಿದೇರಿರ ಸುರೇಶ್, ಅಪ್ಪಚಂಗಡ ಮೋಟಯ್ಯ ಹಾಜರಿದ್ದರು.