ಮಡಿಕೇರಿ, ಜ.೧೧: ಭಾರತ ಸರ್ಕಾರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮಡಿಕೇರಿ ನೆಹರು ಯುವ ಕೇಂದ್ರ, ರೆಡ್ ಕ್ರಾಸ್ ಸೋಸೈಟಿ ಹಾಗೂ ಕೊಂಡAಗೇರಿಯ ಯುವಕ ಸಂಘ ಇವರ ವತಿಯಿಂದ ದಿವ್ಯಚೇತನ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟಿçÃಯ ಯುವ ದಿನ ಹಾಗೂ ಯುವ ಸಪ್ತಾಹದ ಉದ್ಘಾಟನಾ ಸಮಾರಂಭ ಪ್ರಯುಕ್ತ ರಕ್ತದಾನ ಶಿಬಿರವು ತಾ. ೧೨ ರಂದು (ಇಂದು) ಬೆಳಗ್ಗೆ ೧೦.೩೦ ಗಂಟೆಗೆ ಕೊಂಡAಗೇರಿಯಲ್ಲಿ ನಡೆಯಲಿದೆ. ಸಿದ್ದಾಪುರ ಪಿ.ಎಸ್.ಐ. ಮೋಹನ್‌ರಾಜ್, ಕೊಂಡAಗೇರಿ ಯುವ ಸಂಘದ ಅಧ್ಯಕ್ಷ ನಾಸಿರ್, ಕೊಂಡAಗೇರಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಮಹೇಂದ್ರ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರವಿಕುಮಾರ್, ಒಂಟಿಯAಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೇಮಾವತಿ, ಹಾಲುಗುಂದ ಪಿಡಿಒ ಸೆಲ್ವಿನ್ ಜಯಕುಮಾರ್ ಇತರರು ಪಾಲ್ಗೊಳ್ಳಲಿದ್ದಾರೆ.