ಕುಶಾಲನಗರ, ಜ. ೮: ಕುಶಾಲನಗರ ಪಟ್ಟಣದಲ್ಲಿ ಟಿಬೇಟಿಯನ್ ಯುವತಿಯೊಬ್ಬಳ ಮೇಲೆ ಹಲ್ಲೆಗೆ ಪ್ರಯತ್ನಿಸಿದ ದೂರಿನ ಹಿನ್ನಲೆಯಲ್ಲಿ ಇಬ್ಬರ ಮೇಲೆ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬAಧ ಒಬ್ಬನನ್ನು ಬಂಧಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಬೈಲುಕೊಪ್ಪೆಯ ನಿರಾಶ್ರಿತ ಶಿಬಿರದ ಯುವತಿಯೊಬ್ಬಳು ತನ್ನ ಕಾರಿನಲ್ಲಿ ಮಡಿಕೇರಿ ರಸ್ತೆಯ ಬಾರ್ ಒಂದರ ಎದುರುಗಡೆ ನಿಂತಿದ್ದ ಸಂದರ್ಭ ಕ್ಷುಲ್ಲಕ ಕಾರಣಕ್ಕೆ ಯುವಕರ ಜೊತೆ ಮಾತಿಗೆ ಮಾತು ಬೆಳೆದಿದೆ ನಂತರ ಘಟನೆ ಅತಿರೇಕಕ್ಕೆ ತಿರುಗಿ ಕುಶಾಲನಗರ ಪೊಲೀಸ್ ಠಾಣೆಗೆ ಟಿಬೇಟಿಯನ್ ಯುವತಿ ದೂರು ನೀಡಿದ್ದು, ಈ ಸಂಬAದ ಗಣೇಶ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೋರ್ವ ಆರೋಪಿ ಗಣೇಶ ಎಂಬಾತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.