ಮಡಿಕೇರಿ, ಜ. ೭: ಬಂಡಿಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮೂರು ಜಿಂಕೆ ಹಾಗೂ ಮೊಲವೊಂದನ್ನು ಹತ್ಯೆಗೈದ ಪ್ರಕರಣವನ್ನು ಅರಣ್ಯ ಇಲಾಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಕೃತ್ಯಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ತಾಲೂಕಿನ ವಿವಿಧ ಗ್ರಾಮಕ್ಕೆ ಸೇರಿದ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸ ಲಾಗಿದೆ. ಬಂಧಿತರಿAದ ಮಾಂಸ ಸಹಿತವಾಗಿ ಎರಡು ಒಂಟಿ ನಳಿಗೆಯ ಬಂದೂಕು, ಒಂದು ಮಾರುತಿ ಸುಜುಕಿ ಓಮ್ನಿ ವಾಹನವನ್ನು ಅರಣ್ಯಾಧಿ ಕಾರಿಗಳು ವಶಪಡಿಸಿಕೊಂಡಿದ್ದಾರೆ.ಬAಡಿಪುರದ ಓಂಕಾರ ವನ್ಯಜೀವಿ ವಲಯದ ನಾಗಣಾಪುರ ಬ್ಲಾಕ್ -೨ರ ಕಲ್ಲರಕಿಂಡಿ ಎಂಬಲ್ಲಿ ಈ ಕೃತ್ಯ ನಡೆಸಲಾಗಿದೆ. ಸೋಮವಾರ ಪೇಟೆಯ ಚೌಡ್ಲು ಗ್ರಾಮದ ವಿದ್ಯಾಸಾಗರ್(೨೯), ಗೌಡಳ್ಳಿಯ ರವೀಂದ್ರ ಅಲಿಯಾಸ್ ಪೂವಯ್ಯ (೪೧) ಬೆಟ್ಟದಳ್ಳಿಯ ಯಶೋಧರ (೩೪) ತಲ್ತರೆಶೆಟ್ಟಳ್ಳಿಯ ವರಾದ ಪ್ರಸನ್ನ ಜಾನ್ (೩೮) ಸುಜಿತ್ ಅಲಿಯಾಸ್ ತಿಮ್ಮಯ್ಯ (೨೮) ಹಾಗೂ ಶಾಂತಳ್ಳಿಯ ಕುಶಾಲಪ್ಪ (೪೭) ಅವರುಗಳು ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ನಂಜನಗೂಡಿನವರಾದ ಮಹೇಶ್ (೩೫) ಎಂಬಾತ ತಲೆಮರೆಸಿ ಕೊಂಡಿದ್ದಾನೆ.ಆರೋಪಿಗಳು ಮೂರು ಜಿಂಕೆಗಳನ್ನು ಗುಂಡಿಕ್ಕಿ ಹತ್ಯೆಗೈದಿದ್ದರು ಅಲ್ಲದೆ ಉರುಳು ಹಾಕಿ ಮೊಲ ವೊಂದನ್ನು ಕೂಡ ಹತ್ಯೆಗೈದಿದ್ದಾರೆ. ಒಂದು ಜಿಂಕೆಯ ಚರ್ಮವನ್ನು ಸುಲಿದು ಮಾಂಸವಾಗಿ ಬೇರ್ಪಡಿಸಿ ಅಡುಗೆಗೂ ಈ ತಂಡ ಸಿದ್ಧತೆ ನಡೆಸಿದ್ದು, ಈ ಸಂದರ್ಭ ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಇವರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಎರಡುಬಂದೂಕು ಹಾಗೂ ಓಮಿನಿ ಕಾರು (ಕೆ.ಎ. ೦೨ ಎಂ.ಎ. ೦೫೫೫) ಅನ್ನು ಮುಟ್ಟಗೋಲು ಹಾಕಿಕೊಳ್ಳ ಲಾಗಿದೆ.ಈ ಕಾರ್ಯಾಚರಣೆಯನ್ನು ನಟೇಶ್ ಎಸ್.ಆರ್. ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ನಿರ್ದೇಶಕರು, ಬಂಡೀಪುರ ವಿಭಾಗ, ಪರಮೇಶ್ ಕೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಗುಂಡ್ಲುಪೇಟೆ ಉಪವಿಭಾಗ, ಇವರ ಮಾರ್ಗ ದರ್ಶನದಲ್ಲಿ ನಡೆಸಲಾಗಿದೆ.

ನಾಗೇಂದ್ರ ನಾಯಕ ಹೆಚ್.ಎನ್. ವಲಯ ಅರಣ್ಯಾಧಿಕಾರಿಗಳು, ಓಂಕಾರ ವನ್ಯಜೀವಿ ವಲಯ ಹಾಗೂ ಅಮರ್ ಕೆ.ಪಿ. ಅರಣ್ಯಾಧಿಕಾರಿಗಳು, ಶಿವಕುಮಾರ್ ಆರ್. ಉಪವಲಯ ಅರಣ್ಯಾಧಿಕಾರಿಗಳು, ಪ್ರವೀಣ ಹಂಚಿನಾಳ ಉಪವಲಯ ಅರಣ್ಯಾಧಿ ಕಾರಿಗಳು, ರಮೇಶ್ ಮಟಪತಿ, ಉಪ ವಲಯ ಅರಣ್ಯಾಧಿಕಾರಿಗಳು, ಎಸ್‌ಟಿಪಿಎಫ್, ಕಾರ್ತಿಕ್ ಉಪ ವಲಯ ಅರಣ್ಯಾಧಿಕಾರಿಗಳು ಎಸ್‌ಟಿಪಿಎಸ್, ಶ್ರೀಕಾಂತ್ ಎ. ಅರಣ್ಯ ರಕ್ಷಕ, ಸಿದ್ದೇಶ್ ಡಿ. ಅರಣ್ಯ ರಕ್ಷಕ, ಕುಮಾರ ಬಿ. ಅರಣ್ಯ ವೀಕ್ಷಕ ಹಾಗೂ ಓಂಕಾರ ವನ್ಯಜೀವಿ

ವಲಯ ಮತ್ತು ಎಸ್‌ಟಿಪಿಎಫ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.