ನಾಪೆೆÇÃಕ್ಲು, ಜ. ೬: ದೇವಾಲಯ ಅಭಿವೃದ್ಧಿಯಾದರೆ ಗ್ರಾಮದ ಅಭಿವೃದ್ಧಿಯಾದಂತೆ ಇದಕ್ಕೆ ಸರ್ವ ಜನರ ತನು, ಮನ, ಧನ ಸಹಾಯ ಮುಖ್ಯ ಎಂದು ನಾಪೆÉÇÃಕ್ಲು ಶ್ರೀ ಭಗವತಿ ದೇವಾಲಯದ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಅರೆಯಡ ಸೋಮಪ್ಪ ಹೇಳಿದರು.

ನಾಪೆÉÇÃಕ್ಲು ಭಗವತಿ ದೇವಾಲಯದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಪೂಜೆ ಮತ್ತು ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈಗಾಗಲೇ ದೇವಾಲಯ ಅಭಿವೃದ್ಧಿಗೆ ಗ್ರಾಮದ ಎಲ್ಲರೂ ಸಹಕಾರ ನೀಡಿದ್ದು ಮುಂದೆಯು ಸಹಕಾರ ನೀಡುವಂತೆ ಕೋರಿದರು. ದೇವಾಲಯದ ಕೆಲಸ ಕಾರ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ನಿವೃತ್ತ ಡಿವೈಎಸ್ಪಿ ಬೊಪ್ಪಂಡ ಕುಶಾಲಪ್ಪ ಮತ್ತು ಕುಲ್ಲೇಟಿರ ಶಂಕರಿ ಚಂಗಪ್ಪ ಇವರುಗಳನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ನಿವೃತ್ತ ಶಿಕ್ಷಕ ಕುಲ್ಲೇಟಿರ ರಘು ಮುತ್ತಪ್ಪ ವಹಿಸಿದ್ದರು. ನಂತರ ಮಹಾಪೂಜೆಯೊಂದಿಗೆ ಅನ್ನದಾನ ನಡೆಯಿತು.