ಸುಂಟಿಕೊಪ್ಪ, ಜ.೨: ಇಲ್ಲಿನ ಆಟೋಚಾಲಕ ಎನ್.ಆರ್. ಮುರುಳೀಧರ ಅವರು ತಮ್ಮ ಮನೆಯ ಸಮೀಪ ರಾತ್ರಿ ನಿಲ್ಲ್ಲಿಸಿದ್ದ ಆಟೋ ರಿಕ್ಷಾದಿಂದ ಬ್ಯಾಟರಿ ಹಾಗೂ ಚಕ್ರವನ್ನು ಬಿಚ್ಚಿ ಕಳವು ಮಾಡಿದ್ದಾರೆ.

ಸುಮಾರು ಎಂಟು ಸಾವಿರ ನಷ್ಟ ಸಂಭವಿಸಿದೆ ಎಂದು ಸುಂಟಿಕೊಪ್ಪ ಠಾಣೆಯಲ್ಲಿ ಚಾಲಕ ದೂರು ದಾಖಲಿಸಿದ್ದಾರೆ. ಸುಂಟಿಕೊಪ್ಪÀ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಅಧಿಕವಾಗುತ್ತಿದ್ದು, ಕಳೆದ ವಾರ ಒಂದೇ ದಿನದಲ್ಲಿ ೭ ಕಡೆಗಳಲ್ಲಿ ಕಳ್ಳತನÀ ನಡೆದಿದೆ. ಪೊಲೀಸ್ ಇಲಾಖೆ ಆತಂಕಕ್ಕೆ ಕಾರಣವಾಗಿರುವ ಕಳ್ಳರನ್ನು ಬಂಧಿಸುವAತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.