ದೇಶಪ್ರೇಮಿ ಯುವಕ ಸಂಘ ಆಕ್ಷೇಪ

ಮಡಿಕೇರಿ, ಡಿ. ೩೧: ಮಡಿಕೇರಿ ನಗರಸಭೆಯಲ್ಲಿ ಈಗಾಗಲೇ ಸಾರ್ವಜನಿಕರ ಹಲವು ಅಗತ್ಯ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂಬ ಆಕ್ಷೇಪ ಸಾರ್ವಜನಿಕರಲ್ಲಿದೆ. ಈ ನಡುವೆ ಇರುವ ಸಿಬ್ಬಂದಿಗಳನ್ನು ಇದೀಗ ಮಕ್ಕಳ ಜನಗಣತಿಗೆಂದು ನಿಯೋಜಿಸಲಾಗಿದ್ದು, ಮತ್ತಷ್ಟು ಸಮಸ್ಯೆ ಎದುರಾಗಿದೆ ಎಂದು ನಗರದ ದೇಶಪ್ರೇಮಿ ಯುವಕ ಸಂಘ ಆಕ್ಷೇಪಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಅವರು ಇದಕ್ಕೆ ನಗರಸಭೆಯಲ್ಲಿರುವ ಕೆಲವೇ ಸಿಬ್ಬಂದಿಗಳನ್ನು ಬಳಸದೆ, ಅಂಗನವಾಡಿ ಶಿಕ್ಷಕರು ಅಥವಾ ಬದಲಿ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಸೂಕ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.