ಗೋಣಿಕೊಪ್ಪಲು.ಜ. ೧: ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳಿಗೆ ಮತದಾರ ಸ್ಪಷ್ಟ ಬಹುಮತ ನೀಡಿರುವುದಾಗಿ ಬಿಜೆಪಿಯ ಜಿಲ್ಲಾ ವಕ್ತಾರ ಮಾಚಿಮಂಡ ಸುವಿನ್ ಗಣಪತಿ ಹೇಳಿದರು. ಅಮ್ಮತ್ತಿ, ಕಾರ್ಮಾಡುವಿನ ಗ್ರಾಮ ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ ಹಿನೆÀ್ನಲೆಯಲ್ಲಿ ಅಮ್ಮತ್ತಿಯ ಪಟ್ಟಣದಲ್ಲಿ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನೂತನ ಸದಸ್ಯರೊಂದಿಗೆ ವಿಜಯೋತ್ಸವ ಆಚರಿಸಿ ಪಟ್ಟಣದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಸುವಿನ್ ಗಣಪತಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಉತ್ತಮ ಸರ್ಕಾರ ಇರುವುದನ್ನು ಮನಗಂಡು ಮತದಾರರು ಸ್ಪಷ್ಟ ಬಹುಮತ ನೀಡಿದ್ದಾರೆ. ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೆಲಸ ಪೂರೈಸಿದ್ದೇವೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಂಚಾಯ್ತಿಗೆ ಆರಿಸಿ ಬಂದಿದ್ದಾರೆ. ಮುಂದೆಯೂ ಕೂಡ ಜನರ ಬೇಡಿಕೆಯಂತೆ ಉತ್ತಮ ಕೆಲಸ ಮಾಡುವುದಾಗಿ ತಿಳಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಆರ್‌ಎಂಸಿ ಅಧ್ಯಕ್ಷ ಮಾಚಿಮಂಡ ವಸಂತ್ ಮಾತನಾಡಿ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ. ನೂತನವಾಗಿ ಆರಿಸಿ ಬಂದಿರುವ ಪಂಚಾಯ್ತಿ ಸದಸ್ಯರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು ಎಂದರು. ಸಭೆಯಲ್ಲಿ ಪಕ್ಷದ ಪ್ರಮುಖರಾದ ಮಾಚಿಮಂಡ ಪ್ರಸಾದ್ ಚಂಗಪ್ಪ, ಕಾವಾಡಿಚಂಡ ನಾಚಪ್ಪ, ಮಾಚಿಮಂಡ ಮಧುಮಾದಯ್ಯ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮೂಕೊಂಡ ಶಶಿ ಸುಬ್ರಮಣಿ, ಆರ್‌ಎಂಸಿ ನಿರ್ದೇಶಕರಾದ ಗುಮ್ಮಟ್ಟೀರ ಕಿಲನ್ ಗಣಪತಿ ಸೇರಿದಂತೆ ಪಂಚಾಯ್ತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರುಗಳಾದ ಮುಕ್ಕಾಟೀರ ಎಂ.ಬೋಪಣ್ಣ, ರತ್ನ ಹೆಚ್, ಸುನೀತಾ ಎ. ಅಭಿಜಿತ್ ಹೆಚ್.ಎ. ಕುಟ್ಟಂಡ ಆಶಾಪೊನ್ನಮ್ಮ ಎಂ.ಎA.ಲಿಜೇಶ್, ಜಿ.ವಿದ್ಯಾಮೋಹನ್, ಮಾಚಿಮಂಡ ಪುಷ್ಪ ವಿಠಲ ನೆಲ್ಲಮಕ್ಕಡ ಧನು ಮಂದಣ್ಣ, ಮುಕ್ಕಾಟೀರ ಎ.ಸಂತೋಷ್ ಸೇರಿದಂತೆ ಇನ್ನಿತರರು ಹಾಜರಿದ್ದರು. ವಾದ್ಯಗೋಷ್ಠಿಯೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಮೆರವಣಿಗೆ ಸಾಗಿ ವಿಜಯೋತ್ಸವ ಆಚರಿಸಿದರು.