ನಾಪೋಕ್ಲು, ಡಿ. 20: ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ವರ್ಷ ರೂ. 16.17 ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕಲಿಯಾಟಂಡ ಎ. ರಘು ತಮ್ಮಯ್ಯ ಹೇಳಿದರು.

ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದಲ್ಲಿ ಸದಸ್ಯರಿಗೆ ಗೊಬ್ಬರ ಸಾಲ, ಜಾಮೀನು ಸಾಲ ವಿತರಿಸಲಾಗುತ್ತಿದೆ ಎಂದರು.

ಈ ಸಂದರ್ಭ ಹತ್ತನೇ ತರಗತಿಯಲ್ಲಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಅಲ್ಲಾರಂಡ ಎಸ್. ಅಯ್ಯಪ್ಪ ನಿರ್ದೇಶಕರಾದ ಬಡಕಡ ಎಂ. ಬೆಳ್ಳಿಯಪ್ಪ, ಕಲಿಯಾಟಂಡ ಎಂ. ಬೋಪಣ್ಣ, ಎನ್.ಸಿ. ಪೂವಣ್ಣ, ಕೋಡಿಮಣಿಯಂಡ ಎಂ. ನಾಣಯ್ಯ, ಪರದಂಡ ಪಿ. ಪ್ರಮೀಳ, ಎನ್.ಬಿ. ಸುನಿತ, ಎ.ಎನ್. ಲಕ್ಷ್ಮಣ, ಕೋಲೆಯಂಡ. ಅಶೋಕ, ಪಿ.ಟಿ. ಕಾರ್ಯಪ್ಪ, ಕುಡಿಯರ. ಕೆ. ಗಿರೀಶ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಎಸ್. ಮಂಜುಳ ಉಪಸ್ಥಿತರಿದ್ದರು.