ಗುಡ್ಡೆಹೊಸೂರು, ಡಿ. 17: ಕುಶಾಲನಗರ ಗ್ರಾಮಾಂತರ ಠಾಣೆ ವತಿಯಿಂದ ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ ನಡೆಯಿತು. ಈ ಸಂದರ್ಭ ಇಲಾಖಾ ಸಿಬ್ಬಂದಿ ಮುನವರ್ ಪಾಷ ಮಾತನಾಡಿ ಗ್ರಾಮದಲ್ಲಿ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಇಲಾಖೆಯೊಂದಿಗೆ ಜನತೆ ಸಹಕರಿಸುವಂತೆ ಮನವಿ ಮಾಡಿದರು.